ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ವಿರೋಧ ಲೆಕ್ಕಕ್ಕಿಲ್ಲ ಲೋಕಪಾಲ ಮಂಡನೆಗೆ ಸಜ್ಜು

By Mahesh
|
Google Oneindia Kannada News

Lokpal Bill Parliament
ನವದೆಹಲಿ, ಡಿ.22: ಸಿಬಿಐ ಅನ್ನು ಲೋಕಪಾಲ ಮಸೂದೆ ವ್ಯಾಪ್ತಿಯಿಂದ ಹೊರಗಿಟ್ಟು ಹೊಸದಾಗಿ ಕೆಲವು ಅಂಶಗಳನ್ನು ಸೇರಿಸಿ ಮಸೂದೆ ಮಂಡಿಸುವುದು ಭ್ರಷ್ಟಾಚಾರ ವ್ಯವಸ್ಥೆಯನ್ನು ಸಮರ್ಥಿಸಿದಂತೆ ಆಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕಿಡಿ ಕಾರಿದ್ದಾರೆ.

ವಿಪಕ್ಷಗಳು ಹಾಗೂ ಭ್ರಷ್ಟಾಚರ ವಿರೋಧಿ ಹೋರಾಟಗಾರರ ಪ್ರತಿಭಟನೆ ನಡುವೆ ಆತುರಾತುರವಾಗಿ ಯುಪಿಎ ಸರ್ಕಾರ ಬಹುನಿರೀಕ್ಷಿತ ಲೋಕಪಾಲ ಮಸೂದೆ ಮಂಡನೆ ಮಾಡಲು ಸಿದ್ಧತೆ ನಡೆಸಿದೆ.

ಚಿದಂಬರಂ ಉಳಿಸಲು ಯತ್ನ: ಸಿಬಿಐ ಅನ್ನು ಹೊರಗಿಟ್ಟು ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಯುಪಿಎ ಯತ್ನಿಸುತ್ತಿದೆ. ಸಿಬಿಐ ಲೋಕಪಾಲ ವ್ಯಾಪ್ತಿಗೆ ಬಂದರೆ ಗೃಹ ಸಚಿವ ಪಿ. ಚಿದಂಬರಂ ಜೈಲಿಗೆ ಹೋಗುತ್ತಾರೆ. ಚಿದಂಬರಂ ಸೇರಿದಂತೆ ಭ್ರಷ್ಟರನ್ನು ಉಳಿಸಲು ಯುಪಿಎ ತಂತ್ರ ಹೂಡಿದೆ ಎಂದು ಅಣ್ಣಾ ಹಜಾರೆ ಗುಡುಗಿದ್ದಾರೆ.

'ಜನ ಲೋಕಪಾಲ ಕರಡಿನಲ್ಲಿ ಉಲ್ಲೇಖಿಸಿರುವ ಕೆಲವು ಸಲಹೆಗಳನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಪ್ರತಿಷ್ಠೆ ಅಡ್ಡಬರುತ್ತಿದೆ' ಸರ್ಕಾರದ ಲೋಕಪಾಲ ಒಪ್ಪಲು ಸಾಧ್ಯವಿಲ್ಲ ಎಂದು ಅಣ್ಣಾ ತಂಡದ ಸದಸ್ಯ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಅಣ್ಣಾ ಹಜಾರೆ ಲೋಕಪಾಲ ವಿರೋಧಿಸಿ ಡಿ.27 ರಂದು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು, ಡಿ.30ರಂದು ಜೈಲು ಭರೋಗೆ ಕರೆ ನೀಡಿದ್ದಾರೆ.

English summary
The long awaited Lokpal Bill is set to be tabled in the Parliament on Thursday, Dec 22. While the Congress is keen to table the Bill and pass it, opposition party BJP has expressed its disapproval over the government's version of the Lokpal draft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X