ಕೋಡಿಮಠದ ಭವಿಷ್ಯವಾಣಿ ಸದಾನಂದರ ಗೆಲುವು ಖಚಿತ

sadananda-gowda-will-remain-cm-kodimatha
ಹಾಸನ, ಡಿ. 20: ಡಿವಿ ಸದಾನಂದ ಗೌಡರು ನಾಡಿನ ಮುಖ್ಯಮಂತ್ರಿಯಾಗಿ ಮುಂದುವರಿಯುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿವೆ. ಅತ್ತ ಜೆಡಿಎಸ್ ಶಾಸಕರ ದಂಡು ತಟಸ್ಥ ನೀತಿ ಅಳವಡಿಸಿಕೊಳ್ಳುವ ಇರಾದೆಯೊಂದಿಗೆ ದೆಹಲಿ ಚಳಿಯನ್ನು ಅನುಭವಿಸಲು ರಾಷ್ಟ್ರದ ರಾಜಧಾನಿಯತ್ತ ತೆರಳಿದೆ. ಇತ್ತ ಕಾಂಗ್ರೆಸ್ ಮಾತ್ರ ಬಿಜೆಪಿಯನ್ನು ವಿರೋಧಿಸುವುದು ತನ್ನ ಆಜನ್ಮಸಿದ್ಧ ಹಕ್ಕು ಎಂಬಂತೆ ಎಗರಾಡುತ್ತಿದೆ.

ಈ ಮಧ್ಯೆ, ಸದ್ಯಕ್ಕೆ ಸದಾನಂದಗೌಡರೇ ಮುಖ್ಯಮಂತ್ರಿ. ಆದರೆ ಆ ಮುಂದಕ್ಕೆ ಅವರು ಮುಂದುವರಿಯುತ್ತಾರೋ ಇಲ್ಲವೋ ಎಂಬಂತೆ ದೀಪವನ್ನು ಗಾಳಿಗೊಡ್ಡಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಮಠಕ್ಕೆ ಭೇಟಿ ನೀಡಿ ರಾಜಕೀಯ ಭವಿಷ್ಯ ಕೇಳಿದ ನಂತರ ರಾಜ್ಯದ ರಾಜಕಾರಣಿಗಳ ಗಮನ ಈಗ ಕೋಡಿಮಠದತ್ತ ತಿರುಗಿದೆ. ಜನ ಕುತೂಹಲದಿಂದ ನೋಡುತ್ತಿದ್ದಾರೆ.

'ಮುಖ್ಯಮಂತ್ರಿ ಸದಾನಂದ ಗೌಡರು ಡಿ. 22 ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯ ಗಳಿಸುವುದಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಆನಂತರದ ದಿನಗಳಲ್ಲಿ ಅವರು ರಾಜಕೀಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ' ಎಂಬುದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯವಾಣಿ.

'ಸದಾನಂದ ಗೌಡರು ಉತ್ತಮ ರಾಜಕಾರಣಿ. ಅವರ ಒಳ್ಳೆಯತನವೇ ಅವರಿಗೆ ಉನ್ನತ ಸ್ಥಾನ ದೊರಕಿಸಿಕೊಟ್ಟಿದೆ. ಆ ಒಳ್ಳೆಯತನದಿಂದಲೇ ಈಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲು ನೆರವಾಗುತ್ತದೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+