ಕರವೇ ನಾರಾಯಣ ಗೌಡರ ಕೋಟಿಗಟ್ಟಲೆ ಅಕ್ರಮ ಆಸ್ತಿ

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳಿಂದ ಹಣ ಗಳಿಸಲು ತಮ್ಮ ಕಡೆ ಇರುವ ಮತದಾರರ ಪಟ್ಟಿಯ ನಕ್ಷೆಯ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ತೋರಿಸಿ ಹಣ ವಸೂಲು ಮಾಡುತ್ತಿದ್ದಾರೆಂದು ಜಯದೇವ ಪ್ರಸನ್ನ ಆರೋಪಿಸಿದ್ದಾರೆ.
ನಾರಾಯಣ ಗೌಡರು ವಿವಿಧ ಕಡೆಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಈ ಬಗ್ಗೆ ದಾಖಲೆ ಸಹಿತ ಮಾಹಿತಿ ಸದ್ಯದಲ್ಲೇ ನೀಡುತ್ತೇನೆ. ಅವರು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ತನಿಖೆ ನಡೆಸುವಂತೆ ಸದ್ಯದಲ್ಲೇ ಧರಣಿ ನಡೆಸುತ್ತೇನೆ. ನನ್ನ ಕುಟುಂಬಕ್ಕೆ ಗೌಡರು ಯಾವುದೇ ರೀತಿಯ ಆರ್ಥಿಕ ಸಹಾಯ ಮಾಡಿಲ್ಲ, ಅವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಜಯದೇವ ಪ್ರಸನ್ನ ಹೇಳಿಕೆ ನೀಡಿದ್ದಾರೆ.
ವೇದಿಕೆಯಿಂದ ನಾರಾಯಣ ಗೌಡರನ್ನು ಉಚ್ಚಾಟಿಸಲು 16 ಮಂದಿ ಸದಸ್ಯರು ಸಭೆ ಸೇರಿ ಎಲ್ಲರೂ ಸಹಿ ಮಾಡಿದ್ದರು. ಆದರೆ ಗೌಡರು ಅವರಿಗೆ ಬೆದರಿಕೆಯೊಡ್ಡಿ ಹಿಂದೆ ಸರಿಯುವಂತೆ ಮಾಡಿದ್ದಾರೆಂದು ಜಯದೇವ ಪ್ರಸನ್ನ ಆರೋಪಿಸಿದ್ದಾರೆ.












Click it and Unblock the Notifications