Get Updates
Get notified of breaking news, exclusive insights, and must-see stories!

ಡಿಕೆಶಿ ಭೂಮಿ ಎಲ್ಲಿದೆ ಅಂತಾ ನನಗೇ ಗೊತ್ತೇ ಇಲ್ಲ!

DK Shivakumar
ಬೆಂಗಳೂರು, ನ.29: ಭೂ ಡಿನೋಟಿಫಿಕೇಷನ್ ಲಾಭ ಪಡೆದ ಆರೋಪ ಹೊತ್ತಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು 'ನಾನು ಸಾಚಾ, ದಾಖಲೆ ಬೇಕಾದರೆ ತೆಗೆದು ನೋಡಿ, ಜಮೀನು ಪರೀಕ್ಷೆ ಆಗಿದೆ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದರು.

ಇದಕ್ಕೆ ಡಿಕೆ ಶಿವಕುಮಾರ್ ಅವರ ಹಸಿಸುಳ್ಳಿಗೆ ಪ್ರತಿಕ್ರಿಯಿಸಿರುವ ಅಂದಿನ ರಾಜ್ಯ ಮುಖ್ಯ ಕಾರ್ಯದರ್ಶಿ ಬಿಕೆ ದಾಸ್ ಅವರು, ನನಗೆ ಡಿಕೆ ಶಿವಕುಮಾರ್ ಅವರ ಭೂಮಿ ಎಲ್ಲಿದೆ ಎಂಬುದು ಗೊತ್ತಿಲ್ಲ. ನನ್ನ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಷನ್ ಸಂಬಂಧ ಜಮೀನು ಪರೀಕ್ಷೆ ನಡೆದಿಲ್ಲ ಎಂದಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಡಿನೋಟಿಫಿಕೇಷನ್ ಲಾಭ ಪಡೆದು ಬೆನ್ನಿಗಾನಹಳ್ಳಿಯಲ್ಲಿ ಜಮೀನು ಪಡೆದಿರುವ ಬಗ್ಗೆ ಬೆಂಗಳೂರು ಮಿರರ್ ನಲ್ಲಿ ವರದಿ ಪ್ರಕಟವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್ ಅವರು ಬಿಕೆ ದಾಸ್ ಅವರು ಪರಿಶೀಲನೆ ನಡೆಸಿ, ಸರ್ಕಾರದ ಆದೇಶದಂತೆ ಜಮೀನು ಮಂಜೂರು ಮಾಡಿದ್ದರು ಎಂದು ಬೊಗಳೆ ಬಿಟ್ಟಿದ್ದರು.

ಡಿನೋಟಿಫಿಕೇಷನ್ ಹೇಗೆ : ಜೆಡಿಎಸ್ ಸರ್ಕಾರ ಇದ್ದ ಕಾಲದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ದಾಸ್ ಅವರು 2006 ರಲ್ಲಿ ನಿವೃತ್ತಿ ಹೊಂದಿದ್ದಾರೆ. ಡಿನೋಟೀಫಿಕೇಷನ್ ಪ್ರಕ್ರಿಯೆ ಆರಂಭವಾದರೆ ಜಮೀನು ಸ್ವಾದೀನಕ್ಕೆ ಬಿಡಿಎ ಮುಂದಾಗುತ್ತದೆ.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ, ಮುಖ್ಯಮಂತ್ರಿಗಳ ಕಚೇರಿಗಳ ಸಹಯೋಗದೊಂದಿಗೆ ಈ ಕಾರ್ಯ ನಡೆಯುತ್ತದೆ.

ಆದರೆ, ಜಮೀನು ಪರಿಶೀಲನೆ ಮಾಡುವುದು ಮುಖ್ಯ ಕಾರ್ಯದರ್ಶಿ ಕೆಲಸ ಅಲ್ಲ ಎಂಬ ಸಣ್ಣ ಅರಿವು ಕೂಡಾ ಇಲ್ಲದಂತೆ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ದಾಸ್ ಪ್ರತಿಕ್ರಿಯಿಸಿದ್ದಾರೆ.

ಡಿಕೆ ಶಿವಕುಮಾರ್ ಲಾಭ ಪಡೆದಿದ್ದಾರೂ ಹೇಗೆ? ಏಕೆ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+