ಲೋಕಾಯುಕ್ತ ಬಗ್ಗೆ ಸಂಸತ್ತಲ್ಲಿ ಮಾತಾಡುವೆ: ದೇವೇಗೌಡ
ಮೈಸೂರು,
ನ.15: ಒಂದೆಡೆ ಮಗ ಕುಮಾರಸ್ವಾಮಿ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ವಿರುದ್ಧ ಮುರುಕೊಂಡು ಬಿದ್ದಿದ್ದರೆ ಅವರಪ್ಪ ದೊಡ್ಡಗೌಡರು ನ್ಯಾ. ಹೆಗ್ಡೆ ಬಗ್ಗೆ ತಮ್ಮ ಮೃಧು ಧೋರಣೆ ಮುಂದುವರಿಸಿದ್ದಾರೆ. 'ಈಗ ಅರ್ಜೆಂಟೇನು? ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುವೆ' ಎಂದು ಜೆಡಿಎಸ್ ಅಧಿನಾಯಕ ಎಚ್.ಡಿ. ದೇವೇಗೌಡ ನಿಗೂಢವಾಗಿ ಹೇಳಿದ್ದಾರೆ. id="toptextpromo">ಯಾರೋ
ಒಬ್ಬರು ದೂರಿದ್ದಾರೆ ಎಂಬ ಕಾರಣಕ್ಕೆ ನಮಗೆ ಲೋಕಾಯುಕ್ತ ಬೇಕೆ? ಬೇಡವೇ? ಎಂದು ಪ್ರಶ್ನಿಸಿದರೆ ಹೇಗಾದೀತು. ಈ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ದೇವೇಗೌಡ ಜಾಣ ನುಡಿಗಳನ್ನಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಂಸತ್ತಿನಲ್ಲಿ
ಲೋಕಪಾಲ ಮತ್ತು ಜನಲೋಕಪಾಲ ಮಸೂದೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿ ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವೆ. ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿರುವ ಮಧುಕರ ಶೆಟ್ಟಿ ಅವರು ಲೋಕಾಯುಕ್ತದಲ್ಲಿ ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆ ಎಂದು ದೂರಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಗೌಡರು ತಿಳಿಸಿದರು.











Click it and Unblock the Notifications