Get Updates
Get notified of breaking news, exclusive insights, and must-see stories!

ಸೋನಿಯಾಗೆ ಗಾಂಧಿಗೆ 36 ಸಾವಿರ ಕೋಟಿ ಲಂಚ

Dr. Subramani Swamy
ಬೆಂಗಳೂರು ಅ 20: ದೇಶ ಇಂದೆಂದೂ ಕಂಡರಿಯದ ಭಾರೀ ಭ್ರಷ್ಟಾಚಾರ ಎಂದರೆ ಅದು 2ಜಿ ಸ್ಪೆಕ್ಟ್ರಂ ಹಗರಣ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇದರಲ್ಲಿ ಸಿಂಹಪಾಲು ಹೋಗಿದ್ದು ಸುಮಾರು 36ಸಾವಿರ ಕೋಟಿ ರೂಪಾಯಿ ಲಂಚ ಅವರಿಗೆ ಸಲ್ಲಿಕೆಯಾಗಿದೆ ಎಂದು ಜನತಾ ಪಕ್ಷದ ಡಾ.ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಡಾ. ಸ್ವಾಮಿ, ಸುಮಾರು 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಲಂಚ ಕೈಕೈ ಬದಲಾಗಿದೆ. ಲಂಚ ಬದಲಾಗಿದ್ದು ಬಹುಪಾಲು ಕೈ ಪಕ್ಷಕ್ಕೆ. ಇದರಲ್ಲಿ ಕರುಣಾನಿಧಿಗೆ 14 ಸಾವಿರ ಕೋಟಿ, ಎ ರಾಜಾ ಮತ್ತು ಚಿದಂಬರಂಗೆ ತಲಾ ಐದು ಸಾವಿರ ಕೋಟಿ ಲಂಚ ಸಂದಾಯವಾಗಿದೆ ಎಂದು ಟೀಕೆ ಮಾಡಿದ್ದಾರೆ.

ವಿದೇಶದಲ್ಲಿ ಇರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಮುಂದಿನ ಹತ್ತು ವರ್ಷಗಳ ಕಾಲ ಸಾರ್ವಜನಿಕರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಜನರಿಗೆ ಉತ್ತಮ ಮಟ್ಟದ ಮೂಲಭೂತ ಸೌಕರ್ಯ ಒದಗಿಸಬಹುದು. ನಿಯಮಬಾಹಿರವಾಗಿ ತರಂಗಾಂತರ ಮಾರಾಟ ಮಾಡಲು ಉಪಾಯ ನೀಡಿದ್ದೇ ಎ ರಾಜಾ ಎಂದು ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲೂ ಎಸ್ ಎಂ ಕೃಷ್ಣ ಮತ್ತು ಧರಂ ಸಿಂಗ್ ಮೇಲೆ ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಅಗತ್ಯ ಬಿದ್ದರೆ ಈ ಸಂಬಂಧ ಕೂಡ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಡಾ. ಸ್ವಾಮಿ ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+