ಶೋಭಾ ಕರಂದ್ಲಾಜೆ ಯುಪಿಸಿಎಲ್ ಕಂಪನಿಯ ಕೈಗೊಂಬೆ: ಜೆಡಿಎಸ್

ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿ ಸುತ್ತಲಿನ ಗ್ರಾಮಗಳ ಜನರನ್ನು ಸಂಕಷ್ಟಕ್ಕೀಡು ಮಾಡಿರುವ ಯುಪಿಸಿಎಲ್ ಪರ ವಹಿಸಿ ಸಿಎಂ ಮತ್ತು ಸಚಿವೆ ಶೋಭಾ ಜನತೆಗೆ ದ್ರೋಹವೆಸಗುತ್ತಿದ್ದಾರೆ. ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳುವವರೆಗೆ ಸ್ಥಾವರ ಮುಚ್ಚುವ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮರೆತು ಇದೀಗ ಕಂಪನಿಯ ಒತ್ತಡಕ್ಕೆ ಮಣಿದಿದ್ದಾರೆ.
ಅಲ್ಲದೆ ಎರಡನೇ ಹಂತಕ್ಕೆ ಒಪ್ಪಿಗೆ ನೀಡಲು ಮುಂದಾಗಿದ್ದಾರೆ. ತಜ್ಞರು, ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ಸ್ಥಾವರದಿಂದಾಗುತ್ತಿರುವ ಹಾನಿಯನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದರು.
ಆದರೆ ಸಚಿವೆ ಕರಂದ್ಲಾಜೆಯ ಒತ್ತಡಕ್ಕೆ ಮಣಿದು ಅಹವಾಲು ಸಭೆಯನ್ನು ಮಾಡದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಚಿವೆ ತಪ್ಪು ನಡೆಯನ್ನಿಟ್ಟಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವವರೆಗೆ ಯುಪಿಸಿಎಲ್ ಕಾರ್ಯಾರಂಭ ಮಾಡದಂತೆ ಸರಕಾರ ತುರ್ತು ಆದೇಶ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.












Click it and Unblock the Notifications