ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಮತ್ತೆ ಜೈಲಿಗೆ ಹೋಗಲ್ಲ ಬಿಡಿ: ಸಿದ್ದು

By Mahesh
|
Google Oneindia Kannada News

Siddaramaiah
ಬೆಂಗಳೂರು, ಅ.16: ಭೂ ಹಗರಣದ ಆರೋಪಿ ಯಡಿಯೂರಪ್ಪ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿಲ್ಲ ಬಿಡ್ರಿ ಎಂದು ಸಿದ್ದರಾಮಯ್ಯ ಹೇಳಿದ್ದು ಕೇಳಿ ಸುತ್ತಲಿದ್ದವರು ಏನಿದು ಹೊಸ ರಹಸ್ಯ ಎಂದು ಕಣ್ ಕಣ್ ಬಿಟ್ಟರು.

ಎಲ್ಲರ ಮುಖ ನೋಡಿ ನಗೆಯಾಡಿದ ಸಿದ್ದು, ಯಡಿಯೂರಪ್ಪ ಅವರು ಚಾಣಾಕ್ಷ, ಅನಾರೋಗ್ಯದ ನೆಪವೊಡ್ಡಿ ಜಯದೇವ ಆಸ್ಪತ್ರೆ ಸೇರಿದ್ದಾರೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಅದೇ ಎಂಬಂತೆ ಯಡಿಯೂರಪ್ಪ ಅವರ ಚಿಕಿತ್ಸೆಗಾಗಿ 48 ಗಂಟೆಗಳ ಕಾಲ ಬೇಕು ಎಂದು ಡಾ. ಮಂಜುನಾಥ್ ಅವರು ಹೇಳಿದ್ದಾರೆ.

ಹೀಗಾಗಿ ಅ.22ರ ವರೆಗೂ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಯಡಿಯೂರಪ್ಪ ಅವರ ಆರೋಗ್ಯ ಸುಧಾರಿಸಿ ಮತ್ತೆ ಜೈಲಿನ ಮುಖ ನೋಡೋದೋ ನನಗ್ಯಾಕೋ ಡೌಟು ಎಂದು ಸಿದ್ದು ಹೇಳಿದ್ದಾರೆ.

ಅಧಿವೇಶನ ಕರೆದಿಲ್ಲ ಯಾಕೆ?: ನಾನು ಸೆಷನ್ ಕರೆಬೇಕು ಅಂತಾ ಎರಡು ತಿಂಗಳಿನಿಂದ ಹೇಳಿದ್ದೀನಿ. ರಾಜ್ಯದಲ್ಲಿ ತುಂಬಾ ಬರ್ನಿಂಗ್ ಇಶ್ಶೂಸ್ ಇದೆ.

ಬರಗಾಲ ಇದೆ 84 ತಾಲೂಕಿನಲ್ಲಿ ಎಂದು ಅವರೇ ಹೇಳಿಕೊಂಡಿದ್ದಾರೆ. ವಿದ್ಯುತ್ ಸಮಸ್ಯೆ ಕಣ್ಮುಂದೆ ಇದೆ ಆದರೆ, ಸಮಸ್ಯೆ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿಲ್ಲ.

ಅರ್ಧದಷ್ಟು ಕ್ಯಾಬಿನೆಟ್ ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಸೋ, ಇಷ್ಟೊಂದು ಜನ ಕ್ರಿಮಿನಲ್ ಇರೋ ಸರ್ಕಾರ ಮುಂದುವರೆಯುವುದು ಸರಿಯಿಲ್ಲ. ನೈತಿಕತೆ ಇಲ್ಲದ ಸರ್ಕಾರ ವಿಧಾನಸಭೆ ವಿಸರ್ಜಿಸಿ, ರಾಜೀನಾಮೆ ಕೊಟ್ಟು ಮನೆಗೆ ಹೋದರೆ ಒಳ್ಳೆಯದು ಎಂದು ಸಿದ್ದು ಕಿಡಿಯಾಡಿದ್ದಾರೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರೊಡನೆ ರಾಜಭವನದಲ್ಲಿ ಭಾನುವಾರ ಚರ್ಚೆ ನಡೆಸಿ ಹೊರ ಬಂದ ನಂತರ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ತರಾಟೆ ತೆಗೆದುಕೊಂಡರು.

English summary
Congress leader Siddaramaiah today meets Governor HR Bharadwaj and discussed current political situation in Karnataka. Siddaramaiah alleged BS Yeddyurappa will not go to Jail and escape on the basis of health grounds, BJP government should step down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X