ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರಿ ನೌಕರಿಗೆ ಕ್ರಿಮಿನಲ್ ಗಳು ಅನರ್ಹ: ಸುಪ್ರೀಂ
ನ್ಯಾಯಮೂರ್ತಿಗಳಾದ ಆರ್ ವಿ ರವೀಂದ್ರನ್ ಹಾಗೂ ಎ.ಕೆ. ಪಟ್ನಾಯಕ್ ಅವರಿದ್ದ ವಿಭಾಗೀಯ ಪೀಠ, ಪಶ್ಚಿಮ ಬಂಗಾಳಾದ ನಜ್ವಲ್ ಇಸ್ಲಾಂ ಎಂಬುವರ ಖಾಸಗಿ ದೂರಿನ ವಿಚಾರಣೆ ನಡೆಸಿದ ಬಳಿಕ ಈ ರೀತಿ ತೀರ್ಪು ನೀಡಿದೆ.
ಕ್ರಿಮಿನಲ್ ಹಿನ್ನೆಲೆಯುಳ್ಳವರು, ವಿಚಾರಣೆ ಎದುರಿಸುತ್ತಿರುವವರು ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವವರು ಯಾವುದೇ ಸರ್ಕಾರಿ ಸೇವೆ ಅಥವಾ ನೌಕರಿ ಪಡೆಯಲು ಯೋಗ್ಯರಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಯಾವ ಕೇಸು: 2007ರಲ್ಲಿ ಇಸ್ಲಾಂ ಕಾನ್ಸ್ ಸ್ಟೇಬಲ್ ಆಗಿ ಆಯ್ಕೆಯಾಗಿದ್ದರು. ಆದರೆ, ಅವರ ವಿರುದ್ಧ ಐಪಿಸಿ ಸೆಕ್ಷನ್ 148,323, 38,427 ಅನ್ವಯ ಪ್ರಕರಣ ದಾಖಲಾಗಿತ್ತು. ವಿಚಾರಣೆ ಹಂತದಲ್ಲಿದ್ದಾಗ ಅವರ ನೇಮಕಾತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ತಡೆ ಹಿಡಿದಿತ್ತು.
ಇದನ್ನು ಪ್ರಶ್ನಿಸಿ ಇಸ್ಲಾಂ ಅವರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರ್ಜಿ ವಜಾಗೊಂಡಿತ್ತು. ನಂತರ ಪೊಲೀಸ್ ಇಲಾಖೆ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದರು.
Comments
English summary
Supreme Court has rejected the application by West Bengal constable SK Nazrul Islam and said a person facing criminal cases cannot be considered suitable for appointment in government service unless acquitted of the charges.
Story first published: Sunday, October 16, 2011, 16:11 [IST]