'ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರ: ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇದೆ'

1977ರಲ್ಲಿ ರಾಷ್ಟ್ರಮಟ್ಟದಲ್ಲಿ ಪುನರಾವರ್ತನೆ: ಗುಜರಾತಿನಲ್ಲಿ ಈ ಚಳವಳಿಯಿಂದ ಪ್ರೇರಣೆ ಪಡೆದು ಇಡೀ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಕೂಗು ಮೊಳಗಲಾರಂಭಿಸಿತು. ಭ್ರಷ್ಟಾಚಾರ ವಿರೋಧಿ ಧ್ವನಿಯನ್ನು ಅಡಗಿಸಲು ಇಂದಿರಾ ಗಾಂಧಿ ಸರಕಾರ ತುರ್ತುಪರಿಸ್ಥಿತಿಯನ್ನೇ ಹೇರಿತು. ಆದಾಗ್ಯೂ ಜನದನಿ ಉಡುಗಲಿಲ್ಲ. ರಾಷ್ಟ್ರದಾದ್ಯಂತ ಕಾಂಗ್ರೆಸ್ ಹೇಳಹೆಸರಿಲ್ಲದೆ ಪತನಗೊಂಡಿತು. ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಅಧಿಕಾರದ ಚುಕ್ಕಾಣಿ ಹಿಡಿಯಿತು.
1989 ಭ್ರಷ್ಟಾಚಾರ ಭೂತ ಕಾಂಗ್ರೆಸ್ ಹೆಗಲೇರಿತು: ಇನ್ನು, 1989ರಲ್ಲಿ ಅದರದೇ ಆದ ಕಾರಣಗಳಿಂದಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ಭ್ರಷ್ಟಾಚಾರ ಭೂತ ಮತ್ತೆ ಅದರ ಹೆಗಲೇರಿತು. ಬೊಫೋರ್ಸ್ ಹಗರಣವು ರಾಜೀವ್ ಗಾಂಧಿ ನೇತೃತ್ವದ ಸರಕಾರಕ್ಕೆ ಮುಳುಗುನೀರು ತಂದಿತು. ಈಗಲೂ ಮತ್ತೆ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರ ಆಪಾದನೆಯಲ್ಲಿ ಹುದುಗಿಹೋಗಿದೆ.












Click it and Unblock the Notifications