ಕರಡಿಯಾಟ: ಯಡಿಯೂರಪ್ಪ ತಾಕತ್ತಿನ ಅನಾವರಣ

ಇದೇ ವೇಳೆ, ಬೆಂಗಳೂರಿನಲ್ಲಿ ದೊಡ್ಡ ಗೌಡರ ದೊಡ್ಡ ಮಗನಿಗೆ ಲೋಕಾಯುಕ್ತ ಅಟಕಾಯಿಸಿಕೊಳ್ಳುವಂತೆ ನೋಡಿಕೊಂಡರು. ಜಿದ್ದಿಗೆ ಬಿದ್ದ ಯಡ್ಡಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಕರಡಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದರು.
ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಮೂಲಕ ಸಾಧಿಸಿ, ತೋರಿಸುವುದು ಬಹಳಷ್ಟಿತ್ತು. ಅನೇಕರ ಬಾಯಿ ಮುಚ್ಚಿಸುವ ಅನಿವಾರ್ಯತೆ ಅವರಿಗಿತ್ತು. ಪಕ್ಷದಲ್ಲೇ ಮಗ್ಗಲಮುಳ್ಳುಗಳು ಚೂಪಾಗಿ ಚುಚ್ಚತೊಡಗಿದ್ದವು. ತಮ್ಮ ಸಾರಥ್ಯದಲ್ಲೇ ಈ ಉಪಚುನಾವಣೆಯನ್ನೂ ಎದುರಿಸಬೇಕು ಎಂದು ಪರಮಾಪ್ತ ಶೋಭಾ ಮೇಡಂ ಮೂಲಕ ಹೈಕಮಾಂಡಿಗೆ ಹೇಳಿಸಿ ನೋಡಿದರು. ಯಡ್ಡಿ ಕತೆ ಮುಗಿಯಿತು ಎಂದೇ ಎಣಿಸಿದ ಹೈಕಮಾಂಡ್ ಶೋಭಾರನ್ನು ಬರಿಗೈಲಿ ಕಳಿಸಿದರು.












Click it and Unblock the Notifications