ಕರಡಿಯಾಟ: ಯಡಿಯೂರಪ್ಪ ತಾಕತ್ತಿನ ಅನಾವರಣ

koppal-result-bs-yeddyurappa-strength-unfolds
ಬೆಂಗಳೂರು, ಸೆ.29: ಯಡಿಯೂರಪ್ಪ ಎಂಬ ಚಾಣಾಕ್ಷನ ಮುಂದೆ ದೊಡ್ಡಗೌಡರ ಆಟ ಏನೇನೂ ನಡೆಯಲಿಲ್ಲ. ಸಿಬಿಐ ಎಂಬ ಭೂತವನ್ನು ತುಸು ಜೋರಾಗಿಯೇ ಕುಣಿಸಿದ ಯಡಿಯೂರಪ್ಪ, ರೆಡ್ಡಿ ಬ್ರದರ್ಸ್ ಗೆ 'ಚುಪ್ ಹೋ' ಎಂದರು. ಅಷ್ಟೇ ಅಲ್ಲ. ಅವರ ಕಡೆಯವರಿಂದ ಮತ್ತಷ್ಟು ದುಡ್ಡು ಗೆಬರಿ, ಕೊಪ್ಪಳ ಎಂಬ ಬರಡು ಭೂಮಿಯಲ್ಲಿ ಮನಬಂದಂತೆ ಚೆಲ್ಲಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ದೊಡ್ಡ ಗೌಡರ ದೊಡ್ಡ ಮಗನಿಗೆ ಲೋಕಾಯುಕ್ತ ಅಟಕಾಯಿಸಿಕೊಳ್ಳುವಂತೆ ನೋಡಿಕೊಂಡರು. ಜಿದ್ದಿಗೆ ಬಿದ್ದ ಯಡ್ಡಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಕರಡಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದರು.

ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಮೂಲಕ ಸಾಧಿಸಿ, ತೋರಿಸುವುದು ಬಹಳಷ್ಟಿತ್ತು. ಅನೇಕರ ಬಾಯಿ ಮುಚ್ಚಿಸುವ ಅನಿವಾರ್ಯತೆ ಅವರಿಗಿತ್ತು. ಪಕ್ಷದಲ್ಲೇ ಮಗ್ಗಲಮುಳ್ಳುಗಳು ಚೂಪಾಗಿ ಚುಚ್ಚತೊಡಗಿದ್ದವು. ತಮ್ಮ ಸಾರಥ್ಯದಲ್ಲೇ ಈ ಉಪಚುನಾವಣೆಯನ್ನೂ ಎದುರಿಸಬೇಕು ಎಂದು ಪರಮಾಪ್ತ ಶೋಭಾ ಮೇಡಂ ಮೂಲಕ ಹೈಕಮಾಂಡಿಗೆ ಹೇಳಿಸಿ ನೋಡಿದರು. ಯಡ್ಡಿ ಕತೆ ಮುಗಿಯಿತು ಎಂದೇ ಎಣಿಸಿದ ಹೈಕಮಾಂಡ್ ಶೋಭಾರನ್ನು ಬರಿಗೈಲಿ ಕಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+