ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಡಿಯಾಟ: ಯಡಿಯೂರಪ್ಪ ತಾಕತ್ತಿನ ಅನಾವರಣ
ಇದೇ ವೇಳೆ, ಬೆಂಗಳೂರಿನಲ್ಲಿ ದೊಡ್ಡ ಗೌಡರ ದೊಡ್ಡ ಮಗನಿಗೆ ಲೋಕಾಯುಕ್ತ ಅಟಕಾಯಿಸಿಕೊಳ್ಳುವಂತೆ ನೋಡಿಕೊಂಡರು. ಜಿದ್ದಿಗೆ ಬಿದ್ದ ಯಡ್ಡಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಕರಡಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದರು.
ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಮೂಲಕ ಸಾಧಿಸಿ, ತೋರಿಸುವುದು ಬಹಳಷ್ಟಿತ್ತು. ಅನೇಕರ ಬಾಯಿ ಮುಚ್ಚಿಸುವ ಅನಿವಾರ್ಯತೆ ಅವರಿಗಿತ್ತು. ಪಕ್ಷದಲ್ಲೇ ಮಗ್ಗಲಮುಳ್ಳುಗಳು ಚೂಪಾಗಿ ಚುಚ್ಚತೊಡಗಿದ್ದವು. ತಮ್ಮ ಸಾರಥ್ಯದಲ್ಲೇ ಈ ಉಪಚುನಾವಣೆಯನ್ನೂ ಎದುರಿಸಬೇಕು ಎಂದು ಪರಮಾಪ್ತ ಶೋಭಾ ಮೇಡಂ ಮೂಲಕ ಹೈಕಮಾಂಡಿಗೆ ಹೇಳಿಸಿ ನೋಡಿದರು. ಯಡ್ಡಿ ಕತೆ ಮುಗಿಯಿತು ಎಂದೇ ಎಣಿಸಿದ ಹೈಕಮಾಂಡ್ ಶೋಭಾರನ್ನು ಬರಿಗೈಲಿ ಕಳಿಸಿದರು.
Comments
English summary
JDS supremo HD Deve Gowda felt the pulse of Koppal By-election and the Money power of BSY. As such he stayed away from the election. Paving the wat for BJP's easy win. And Former chief minister B.S. Yeddyurappa's strength unfolded.
Story first published: Thursday, September 29, 2011, 16:10 [IST]