ಸಿಎಂ ಮಾಯಾವತಿ ಪ್ರತಿಮೆಗಳು ನೆಲಕ್ಕೆ ಉರುಳಲಿದೆ

ಸರ್ವಾಧಿಕಾರಿಗಳಿ ಮೆರೆದವರ ಗತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. 2012ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯದ ತುಂಬಾ ತಲೆ ಎತ್ತಿ ನಿಂತಿರುವ ಮಾಯಾತಿ ಅವರ ಪ್ರತಿಮೆಗಳನ್ನು ಹೊಡೆದುರಳಿಸುವುದು ನಮ್ಮ ಮೊದಲ ಕೆಲಸ ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಕಳೆದ 4 ವರ್ಷಗಳಲ್ಲಿ ಮಾಯಾವತಿ ಪ್ರತಿಮೆಗಳು, ಸ್ಮಾರಕಗಳ ಸ್ಥಾಪನೆ, ನಿರ್ವಹಣೆಗೆ ಸುಮಾರು 40,000 ಕೋಟಿ ರು ಖರ್ಚಾಗಿದೆ. ಇದೇ ರೀತಿ ಬಿಎಸ್ ಪಿ ಚಿನ್ಹೆ ಆನೆಯ ಪ್ರತಿಮೆ ಸ್ಥಾಪನೆಗೆ 2,000 ಕೋಟಿ ರು ಸಾರ್ವಜನಿಕ ಹಣವನ್ನು ವ್ಯಯಿಸಲಾಗಿದೆ ಎಂದು ಸಮಾಜವಾಗಿ ಪಕ್ಷ ಪ್ರಕಟಿಸಿದೆ.












Click it and Unblock the Notifications