ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಲೋಕಪಾಲ್ ಇದ್ದಿದ್ದರೆ ಚಿದಂಬರಂ ಇಷ್ಟೊತ್ತಿಗೆ ಜೈಲಿಗೆ: ಅಣ್ಣಾ

By Srinath
|
Google Oneindia Kannada News

anna-on-chidambaram-2g-pc-in-jail-jan-lokpal
ಮುಂಬೈ, ಸೆ.24: ಜನಲೋಕ ಪಾಲ್ ಕಾಯಿದೆ ಜಾರಿಯಲ್ಲಿದ್ದಿದ್ದರೆ ಸ್ಪೆಕ್ಟ್ರಂ ಹಗರಣದ ಸಮ್ಮುಖದಲ್ಲಿ ಗೃಹ ಸಚಿವ ಪಿ. ಚಿದಂಬರಂ ಇಷ್ಟೊತ್ತಿಗೆ ಜೈಲಿನಲ್ಲಿರಬೇಕಿತ್ತು ಎಂದು ಭ್ರಷ್ಟಾಚಾರ ವಿರೋಧಿ ಚಳುವಳಿಗಾರ ಆಣ್ಣಾ ಹಜಾರೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಚಿದಂಬರಂ ಅವರನ್ನು ಈಗಾಗಲೇ 'ಅಪ್ರಮಾಣಿಕ' ಎಂದು ಜರಿದಿರುವ ಅಣ್ಣಾ, ತಿಹಾರ್ ಜೈಲಿಗೆ ತಮ್ಮನ್ನು ಹಾಕಿದ್ದರ ಹಿಂದೆ ಇಂತಹ 'ಕಿಡಿಗೇಡಿ' ವ್ಯಕ್ತಿಯ ಕೈವಾಡವೇ ಕೆಲಸ ಮಾಡಿದ್ದು ಎಂದಿದ್ದಾರೆ.

ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ 2ಜಿ ಸ್ಪೆಕ್ಟ್ರಂ ಲೈಸೆನ್ಸ್‌ಗಳನ್ನು ಹರಾಜು ಹಾಕಲು ಪಟ್ಟು ಹಿಡಿಯದಿದ್ದರೆ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿರಲಿಲ್ಲ ಎಂದಿರುವ ರಹಸ್ಯ ಟಿಪ್ಪಣಿಯೊಂದನ್ನು ಪ್ರಣವ್‌ ಮುಖರ್ಜಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳೆದ ಮಾರ್ಚ್‌ನಲ್ಲಿ ಕಳುಹಿಸಿದ ಸಂಗತಿ ಆರ್ ಟಿಐ ಪ್ರಶ್ನೆಯೊಂದರ ಮೂಲಕ ಬಹಿರಂಗವಾದ ಬಳಿಕ ಹಗರಣ ಚಿದು ಕೊರಳಿಗೆ ಸುತ್ತಿಕೊಂಡಿದೆ.

English summary
In the midst of fresh controversy in the 2G spectrum case, anti-graft crusader Anna Hazare has said Home Minister P Chidambaram would have been behind bars had the Jan Lokpal legislation been in existence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X