ಜನಲೋಕಪಾಲ್ ಇದ್ದಿದ್ದರೆ ಚಿದಂಬರಂ ಇಷ್ಟೊತ್ತಿಗೆ ಜೈಲಿಗೆ: ಅಣ್ಣಾ

ಚಿದಂಬರಂ ಅವರನ್ನು ಈಗಾಗಲೇ 'ಅಪ್ರಮಾಣಿಕ' ಎಂದು ಜರಿದಿರುವ ಅಣ್ಣಾ, ತಿಹಾರ್ ಜೈಲಿಗೆ ತಮ್ಮನ್ನು ಹಾಕಿದ್ದರ ಹಿಂದೆ ಇಂತಹ 'ಕಿಡಿಗೇಡಿ' ವ್ಯಕ್ತಿಯ ಕೈವಾಡವೇ ಕೆಲಸ ಮಾಡಿದ್ದು ಎಂದಿದ್ದಾರೆ.
ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ 2ಜಿ ಸ್ಪೆಕ್ಟ್ರಂ ಲೈಸೆನ್ಸ್ಗಳನ್ನು ಹರಾಜು ಹಾಕಲು ಪಟ್ಟು ಹಿಡಿಯದಿದ್ದರೆ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿರಲಿಲ್ಲ ಎಂದಿರುವ ರಹಸ್ಯ ಟಿಪ್ಪಣಿಯೊಂದನ್ನು ಪ್ರಣವ್ ಮುಖರ್ಜಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳೆದ ಮಾರ್ಚ್ನಲ್ಲಿ ಕಳುಹಿಸಿದ ಸಂಗತಿ ಆರ್ ಟಿಐ ಪ್ರಶ್ನೆಯೊಂದರ ಮೂಲಕ ಬಹಿರಂಗವಾದ ಬಳಿಕ ಹಗರಣ ಚಿದು ಕೊರಳಿಗೆ ಸುತ್ತಿಕೊಂಡಿದೆ.












Click it and Unblock the Notifications