ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಕಂಪದ ಆಧಾರದಲ್ಲಿ ರೆಡ್ಡಿಗಳ ಕೈಡಿದ KMF

By Srinath
|
Google Oneindia Kannada News

soma-reddy-gains-kmf-sympathy-wave-works
ಬೆಂಗಳೂರು, ಸೆ. 20: ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಿಬಿಐ ಕುಣಿಕೆಯಲ್ಲಿ ಸಿಲುಕಿ ಗಣಿರೆಡ್ಡಿಗಳು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನದ ಹಿನ್ನಡೆಗೆ ಕಾರಣವಾಗುವಂಥ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಗಣಿ ರೆಡ್ಡಿಗಳ ಸೋದರ ಗಾಲಿ ಸೋಮಶೇಖರರೆಡ್ಡಿ KMF ಅಧ್ಯಕ್ಷರಾಗಿ ಮತ್ತೂಂದು ಅವಧಿಗೆ ಮುಂದುವರಿದಿದ್ದಾರೆ.

ಎರಡನೇ ಬಾರಿಯೂ ಅವರನ್ನೇ ಅಧ್ಯಕ್ಷ ಪದವಿಗೆ ಕಣಕ್ಕಿಳಿಸಲು ಸೋಮವಾರ ಸಂಜೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಮತ್ತು ಸರ್ಕಾರದ ಅಸ್ತಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರೆಡ್ಡಿ ಸೋದರರು, ಮಂತ್ರಿಗಿರಿಯಿಂದಲೂ ವಂಚಿತರಾಗಿರುವ ಈ ಸಂದರ್ಭದಲ್ಲಿ KMF ಅಧ್ಯಕ್ಷಗಿರಿ ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಭಾವನೆಯೂ ಸೋಮಶೇಖರರೆಡ್ಡಿಗೆ ವರವಾಗಿದೆ.

KMFನಲ್ಲಿ ಭದ್ರವಾಗಿ ಬೇರೂರಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರ ಆಳ್ವಿಕೆಯನ್ನು ಕೊನೆಗಾಣಿಸಿ ಬಿಜೆಪಿ ಬಾವುಟ ಹಾರಿಸುವಲ್ಲಿ ಗಣಿ ರೆಡ್ಡಿಗಳ ವಿಶೇಷ ಶ್ರಮ ಹಾಗೂ ಹಠ ಮುಖ್ಯ ಕಾರಣ. ಹೀಗಾಗಿ ಮತ್ತೂಂದು ಅವಧಿಗೆ ಅವರನ್ನೇ ಅಧ್ಯಕ್ಷರನ್ನಾಗಿಸುವುದು ಸೂಕ್ತ ಎಂಬ ಅಭಿಮತವೂ ಇಲ್ಲಿ ಕೆಲಸ ಮಾಡಿದೆ. ಆದರೆ ...

English summary
G. Somashekara Reddy has regained Chairmanship of KMF thanks to Sympathy wave created after the Bellary Reddy brothers caught in Lokayukta and CBI turmoil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X