ಅನುಕಂಪದ ಆಧಾರದಲ್ಲಿ ರೆಡ್ಡಿಗಳ ಕೈಡಿದ KMF

ಎರಡನೇ ಬಾರಿಯೂ ಅವರನ್ನೇ ಅಧ್ಯಕ್ಷ ಪದವಿಗೆ ಕಣಕ್ಕಿಳಿಸಲು ಸೋಮವಾರ ಸಂಜೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಮತ್ತು ಸರ್ಕಾರದ ಅಸ್ತಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರೆಡ್ಡಿ ಸೋದರರು, ಮಂತ್ರಿಗಿರಿಯಿಂದಲೂ ವಂಚಿತರಾಗಿರುವ ಈ ಸಂದರ್ಭದಲ್ಲಿ KMF ಅಧ್ಯಕ್ಷಗಿರಿ ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಭಾವನೆಯೂ ಸೋಮಶೇಖರರೆಡ್ಡಿಗೆ ವರವಾಗಿದೆ.
KMFನಲ್ಲಿ ಭದ್ರವಾಗಿ ಬೇರೂರಿದ್ದ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರ ಆಳ್ವಿಕೆಯನ್ನು ಕೊನೆಗಾಣಿಸಿ ಬಿಜೆಪಿ ಬಾವುಟ ಹಾರಿಸುವಲ್ಲಿ ಗಣಿ ರೆಡ್ಡಿಗಳ ವಿಶೇಷ ಶ್ರಮ ಹಾಗೂ ಹಠ ಮುಖ್ಯ ಕಾರಣ. ಹೀಗಾಗಿ ಮತ್ತೂಂದು ಅವಧಿಗೆ ಅವರನ್ನೇ ಅಧ್ಯಕ್ಷರನ್ನಾಗಿಸುವುದು ಸೂಕ್ತ ಎಂಬ ಅಭಿಮತವೂ ಇಲ್ಲಿ ಕೆಲಸ ಮಾಡಿದೆ. ಆದರೆ ...












Click it and Unblock the Notifications