ಸಚಿವ ಸ್ಥಾನದ ಆಕಾಂಕ್ಷಿ ಸೋಮ ರೆಡ್ಡಿ ಕೈಜಾರಲಿದೆ KMF ಪಟ್ಟ

ಸಿಬಿಐನಿಂದ ರೆಡ್ಡಿ ಬಂಧನ, ಶ್ರೀರಾಮುಲು ರಾಜೀನಾಮೆ ಪ್ರಹಸನ ಮತ್ತು ಈಗಿನ ರಾಜಕೀಯ ಸಮೀಕ್ಷೆಯನ್ನು ನೋಡಿದರೆ ಬಿಜೆಪಿಗೆ ಬಳ್ಳಾರಿ ರೆಡ್ಡಿಗಳ ಓಲೈಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಮಶೇಖರರೆಡ್ಡಿ ಅವರು ಮಂತ್ರಿಯಾದರೂ ಆಶ್ಚರ್ಯವಿಲ್ಲ.
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಗಾಲಿ ಜನಾರ್ದನರೆಡ್ಡಿ, ಗಾಲಿ ಕರುಣಾಕರರೆಡ್ಡಿ ಹಾಗೂ ಬಿ.ಶ್ರೀರಾಮಲು ಅವರನ್ನು ಮಂತ್ರಿಮಂಡಲದಿಂದ ಕೈಬಿಟ್ಟಿದ್ದರಿಂದ ಅವರ ಪರವಾಗಿ ಬೇರೆಯವರಿಗೆ ಅವಕಾಶ ನೀಡಲು ಬಿಜೆಪಿ ನಾಯಕರು ಸಿದ್ಧವಾಗಿದ್ದಾರೆ. ಹೀಗಾಗಿ ಗಣಿರೆಡ್ಡಿಗಳ ಬೆಂಬಲಿಗರ ಪೈಕಿ ಹಲವು ಶಾಸಕರ ಜತೆ ಸೋಮಶೇಖರೆಡ್ಡಿ ಅವರ ಹೆಸರೂ ಬಲವಾಗಿ ಕೇಳಿಬಂದಿದೆ.












Click it and Unblock the Notifications