ಬಿಜೆಪಿ ಅಧ್ಯಕ್ಷ ಮಹೋದಯ್ ಗಡ್ಕರಿ ಡೊಳ್ಳು ಹೊಟ್ಟೆಗೆ ಕತ್ತರಿ

ವಿಷಯ ಏನಪಾ ಅಂದರೆ ಗಡ್ಕರಿ (54) ಅವರು ಇಲ್ಲಿನ ಸೈಫಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಮಧುಮೇಹಕ್ಕಾಗಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದು, ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜಕಾರಣಿಗಳೆಂದರೆ ಡೊಳ್ಳು ಹೊಟ್ಟೆ ನೇತಾರರು ಎಂಬುದು ಜನಜನಿತ. ವ್ಯಂಗ್ಯಚಿತ್ರಕಾರರಿಗೋ ಇವರ ಹೊಟ್ಟೆಯ ಮೇಲೆ ಕಣ್ಣು! ನಮ್ಮ ಇಂತಹ ಡೊಳ್ಳು ಹೊಟ್ಟೆ ನೇತಾರರು ಅಸಂಖ್ಯಾತವಾಗಿದ್ದಾರೆ. ಆದರೆ ಅದರ ಮೇಲೆ ಕತ್ತರಿ ಪ್ರಯೋಗಿಸಿಕೊಂಡಿರುವವರು ಗಡ್ಕರಿ ಒಬ್ಬರೇ.
ಗಡ್ಕರಿ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ಡಾ. ಮುಫಾಜಲ್ ಲಕಡವಾಲಾ ಹೇಳಿದ್ದಾರೆ. ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ಗಡ್ಕರಿಗೆ ಸಲಹೆ ನೀಡಲಾಗಿದೆ. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತಿ ನಿದ್ರೆ ಮಧ್ಯೆ ಉಸಿರಾಟವೇ ನಿಂತುಹೋಗುವ ಕಾಯಿಲೆಯಿಂದ ಅವರು ಬಳಲುತ್ತಿದ್ದರು.












Click it and Unblock the Notifications