ಕೊಪ್ಪಳ ಅಭ್ಯರ್ಥಿ ಗೆದ್ರೆ ಬಿಜೆಪಿ ಸರ್ಕಾರ ಗಾನ್?
ಈ ನಡುವೆ ಪದಾಧಿಕಾರಿಗಳ ಸಭೆಯಲ್ಲಿ ಕಣ್ಣೀರಿಟ್ಟ ಹಾಲಿ ಸಿಎಂ ಸದಾನಂದ ಗೌಡ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಕಿಕೊಟ್ಟ ಹಾದಿಯಲ್ಲೇ ನಡೆದಿದ್ದಾರೆ. ಕಾರ್ಯಕರ್ತರಿಗೆ ಯಾರನ್ನು ಬೆಂಬಲಿಸಬೇಕು ಎಂಬುದು ತಿಳಿಯದೇ ವಿಚಿತ್ರ ಸಂಕಟದಲ್ಲಿದ್ದಾರೆ. ಚುನಾವಣಾ ವಿಶೇಷ ಫುಲ್ ಪ್ಯಾಕೇಜ್ ಇಲ್ಲಿದೆ.
ಕೊಪ್ಪಳ ಅಭ್ಯರ್ಥಿಗೆ ಶಾಪ: ಈ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯ ಪಕ್ಷ ಆಡಳಿತ ಚುಕ್ಕಾಣಿಯನ್ನು ಹೆಚ್ಚು ದಿನಗಳ ಕಾಲ ಹಿಡಿಯಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ಎಲ್ಲರಲ್ಲೂ ಮನೆಮಾಡಿದೆ.
ಪ್ರಥಮ ಬಾರಿಗೆ ಉಪಚುನಾವಣೆ ಎದುರಿಸುತ್ತಿರುವ ಇಲ್ಲಿನ ಜನರು ಕ್ಷೇತ್ರಕ್ಕೆ ಅಂಟಿದ ಶಾಪದ ಬಗ್ಗೆ ಪುರಾವೆ ಸಮೇತ ವಿವರಿಸುತ್ತಾರೆ. ಈ ಹಿಂದೆ 5-6 ಚುನಾವಣೆಗಳ ಫಲಿತಾಂಶ ನೋಡಿದರೆ ಸರ್ಕಾರದ ಸ್ಥಿತಿ ಗತಿ ಮೇಲೆ ಕೊಪ್ಪಳ ಕ್ಷೇತ್ರದ ಪ್ರಭಾವ ಎಷ್ಟಿದೆ ಎಂಬುದು ತಿಳಿಯುತ್ತದೆ.
*
1989ರಲ್ಲಿ
ನಡೆದ
ಸಾರ್ವತ್ರಿಕ
ಚುನಾವಣೆಯಲ್ಲಿ
ಪಕ್ಷೇತರ
ಅಭ್ಯರ್ಥಿಯಾಗಿ
ಮಲ್ಲಿಕಾರ್ಜುನ
ದಿವಟರ
ಆಯ್ಕೆಗೊಂಡಿದ್ದರು.
ಆದರೆ,
ಆಗ
ರಾಜ್ಯದಲ್ಲಿ
ಕಾಂಗ್ರೆಸ್
ಸರ್ಕಾರ
ಇತ್ತು.
*
1994ರಲ್ಲಿ
ಪಕ್ಷೇತರ
ಅಭ್ಯರ್ಥಿಯಾಗಿ
ಸಂಗಣ್ಣ
ಕರಡಿ
ಚುನಾಯಿತರಾದ
ಸಂದರ್ಭದಲ್ಲಿ
ಜನತಾ
ದಳದ
ಸರ್ಕಾರ
ಇತ್ತು.
*
1999ರಲ್ಲಿ
ಜೆಡಿಯುನಿಂದ
ಕಣಕ್ಕಿಳಿದ
ಸಂಗಣ್ಣ
ಕರಡಿ
ಜಯಭೇರಿ
ಬಾರಿಸಿದಾಗ
ಅತ್ತ
ಅಧಿಕಾರದಲ್ಲಿ
ಕಾಂಗ್ರೆಸ್
ಇತ್ತು.
*
2004ರಲ್ಲಿ
ಬಿಜೆಪಿ
ಟಿಕೆಟ್ನಿಂದ
ಸ್ಪರ್ಧಿಸಿ
ತಮ್ಮ
ಅದೃಷ್ಟ
ಪರೀಕ್ಷಿಸಿದ
ಸಂಗಣ್ಣ
ಕರಡಿ
ಸೋಲನುಭವಿಸಿದರು.
ಕಾಂಗ್ರೆಸ್ನಿಂದ
ಸ್ಪರ್ಧಿಸಿದ್ದ
ಕೆ.ಬಸವರಾಜ
ಹಿತ್ನಾಳ್
ಶಾಸಕರಾದರು.
ವಿಶೇಷ
ಎಂದರೆ
ಆಗ
ರಾಜ್ಯದಲ್ಲಿ
ಕಾಂಗ್ರೆಸ್-
ಜೆಡಿಎಸ್
ರಚಿಸಿದ್ದ
ಸಮ್ಮಿಶ್ರ
ಸರ್ಕಾರ
ಅಸ್ತಿತ್ವದಲ್ಲಿತ್ತು.
*
2008ರಲ್ಲಿ
ನಡೆದ
ಚುನಾವಣೆಯಲ್ಲಿ
ಮತ್ತೆ
ಜೆಡಿಎಸ್ನಿಂದ
ಸಂಗಣ್ಣ
ಕರಡಿ
ಹಾಗೂ
ಕೆ.ಬಸವರಾಜ
ಹಿತ್ನಾಳ್
ಸ್ಪರ್ಧಿಸಿದರು.
ಆದರೆ,
ಜೆಡಿಎಸ್ನ
ಸಂಗಣ್ಣ
ಕರಡಿ
ಜಯಭೇರಿ
ಬಾರಿಸಿದರೂ
ರಾಜ್ಯದಲ್ಲಿ
ಬಿಜೆಪಿ
ಸರ್ಕಾರ
ರಚನೆ
ಮಾಡಿತ್ತು.
ಒಟ್ಟಾರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು ಶಾಸಕರಾಗುವ ಅಭ್ಯರ್ಥಿಯ ಪಕ್ಷ ಮಾತ್ರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವದಿಲ್ಲ. ಹೀಗಾಗಿ ಈ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುವುದೇ ಇಲ್ಲ ಎಂಬ ಅಭಿಪ್ರಾಯಕ್ಕೆ ಕ್ಷೇತ್ರದ ಮತದಾರರು ಬಂದಿದ್ದಾರೆ.
ಈ ಬಾರಿ ಬಿಜೆಪಿಯ ಆಪರೇಷನ್ ಕಮಲದ 15 ನೇ ದಾಳವಾಗಿ ಉರುಳಿದ ಇದೇ ಕರಡಿ ಸಂಗಣ್ಣ ಬಿಜೆಪಿ ಟೆಕೆಟ್ ನಿಂದ ಸ್ಪರ್ಧಿಸುತ್ತಿದ್ದಾರೆ. ಸಂಗಣ್ಣ ಗೆದ್ದರೆ ಕಥೆ ಬದಲಾಗಲಿದೆ. ಕೊಪ್ಪಳದಲ್ಲಿ ಬಿಜೆಪಿ ನಾಯಕರ ನಾಯಕತ್ವದ ಯಾರು ವಹಿಸಿದ್ದಾರೆ ಮುಂದೆ ಓದಿ. ..