ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಮಾನಸಿಕ ಅಸ್ವಸ್ಥ: ಸಚಿವ ರೇಣುಕಾಚಾರ್ಯ

By Srinath
|
Google Oneindia Kannada News

ಬೆಂಗಳೂರು, ಸೆ.15: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸದಾನಂದ ಗೌಡರನ್ನು ದಿನಗೂಲಿ ಮುಖ್ಯಮಂತ್ರಿ ಎಂದು ಗೇಲಿ ಮಾಡಿದ್ದ ಕುಮಾರಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರೇಣುಕಾ, ಕೇಂದ್ರದಲ್ಲಿ 21 ಪಕ್ಷಗಳ ಜತೆ ಸೇರಿ ಪ್ರಧಾನಿಯಾಗಿದ್ದ ದೇವೇಗೌಡ ಮತ್ತು ಬಿಜೆಪಿ ನೆರವಿನಿಂದ ಅಧಿಕಾರಕ್ಕೆ ಬಂದಿದ್ದ ಕುಮಾರಸ್ವಾಮಿಯವರು ಯಾರ ದಿನಗೂಲಿಗಳಾಗಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

'ಕುಮಾರಸ್ವಾಮಿ ಮಾತನಾಡುವಾಗ ಎಚ್ಚರ ತಪ್ಪುತ್ತಾರೆ. ಆದ್ದರಿಂದ ಹಗುರವಾಗಿ ಮಾತನಾಡುತ್ತಾರೆ. ಮಾಜಿ ಸಿಎಂ ತಮ್ಮ ವರ್ತನೆಯನ್ನು ಶೀಘ್ರವೇ ತಿದ್ದಿಕೊಳ್ಳುತ್ತಾರೆ' ಎಂಬ ಆಶಾಭಾವ ತಮಗಿದೆ ಎಂದು ಅವರು ಹೇಳಿದರು.

English summary
Former Chief Minister HD Kumaraswamy is mentally ill. As such he needs psychiatric treatment says Minister MP Renukacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X