800 ರು. ಲಂಚ ತಿಂದಿದ್ದಕ್ಕೆ 10 ವರ್ಷ ಜೈಲು!

ಸುರಪುರ ಬಿಇಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಲ್ಸನ್ ವಿಜಯಕುಮಾರ್ ಶಿಕ್ಷೆಗೊಳಗಾದ ಆರೋಪಿ. ಜಿಪಿಎಫ್ ಹಣ ಮಂಜೂರು ಮಾಡಲು ಸುರಪುರ ತಾಲೂಕಿನ ಮಾಚಗೊಂಡಾಳ ಗ್ರಾಮದ ಶಿಕ್ಷಕ ಆದಪ್ಪ ನಾಯಕ ಎಂಬವರಿಂದ 800 ರು. ಲಂಚ ಸ್ವೀಕರಿಸುತ್ತಿದ್ದಾಗ ವಿಲ್ಸನ್ ವಿಜಯಕುಮಾರ್ 2006ರ ನವೆಂಬರ್ 18ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಲೋಕಾಯುಕ್ತ ಇನ್ಸಪೆಕ್ಟರ್ ಬಿ.ಎಚ್.ಚಂದ್ರಕಾಂತ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕ ಸಿದ್ದಲಿಂಗಪ್ಪ ಬೋರಡ್ಡಿ ವಾದ ಮಂಡಿಸಿದ್ದರು.












Click it and Unblock the Notifications