ಗಾಲಿ ರೆಡ್ಡಿಗಾರು ಈಗ ಕೈದಿ ನಂ. 697

ಏನಪಾ ಅಂದರೆ ಚಂಚಲಗೂಡ ಜೈಲು ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಕೊಳ್ಳುವಾಗ ಅವರಿಗೆ ಕೈದಿ ನಂ. 697 ಎಂಬ ಸಂಖ್ಯೆಯನ್ನು ತೊಡಿಸಿದ್ದಾರೆ. ಹಾಗೆಯೇ ಅವರ ಜತೆಗೇ ಬಂಧನಕ್ಕೊಳಗಾಗಿರುವ ಶ್ರೀನಿವಾಸ್ ರೆಡ್ಡಿಗೂ (ಇವರು ಜನಾ ರೆಡ್ಡಿ ನೆಂಟರಲ್ಲ) ಸಂಖ್ಯೆ ದಯಪಾಲಿಸಲಾಗಿದ್ದು ಅವರೀಗ ಕೈದಿ ನಂ. 698.
ಸೋಮವಾರವಿಡೀ ಹೊಟ್ಟೆಗೆ ಸರಿಯಾಗಿ ಏನೂ ತೆಗೆದುಕೊಳ್ಳದೇ ಇರುವುದರಿಂದ ಮಂಗಳವಾರ ಬೆಳಗ್ಗೆ ಹಸಿವು ಹೆಚ್ಚಾಗಿ ಜನಾ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಜೈಲಿನ ಉಪಹಾರ ಸೇವಿಸಿದ್ದಾರೆ. ಇಂಗ್ಲಿಷ್ ದಿನಪತ್ರಿಕೆಗಳು ಬೇಕು ಎಂದಾಗ ಜೈಲಾಧಿಕಾರಿಗಳು ನಯವಾಗಿ ತಿರಿಸ್ಕರಿಸಿದ್ದಾರೆ. ಬೇಕಾದರೆ ತೆಲುಗು ಪತ್ರಿಕೆಗಳನ್ನು ಓದಿ ಎಂದು ಸೂಚಿಸಿದ್ದಾರೆ. ಮನೆ ಊಟಕ್ಕಾಗಿ ಮನವಿ ಸಲ್ಲಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇನ್ನು, ಅಕ್ಷರಶಃ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದ ರೆಡ್ಡಿಗಾರುಗೆ ಪಾಪ ಮೊದಲ ರಾತ್ರಿ ಅನುಭವ ಹೇಗಿತ್ತು ತಿಳಿದುಕೊಳ್ಳಬಯಸುವವರಿಗಾಗಿ... ಮಾವನ ಮನೆಯ ಊಟ ಬೇಡವೆಂದ ಮುಖ ತಿರುಗಿಸಿದ ರೆಡ್ಡಿ ಜೋಡಿ (ತವರು)ಮನೆಯವರು ತಂದುಕೊಟ್ಟ ಬಿಸ್ಕತ್ತನ್ನು ತಿಂದಿದ್ದಾರೆ. ಅನ್ನ, ಬೇಳೆ ಸಾರು ಮತ್ತು ಚಪಾತಿ ಊಟವನ್ನು ಬಿಲ್ಕುಲ್ ಬೇಡ ಎಂದಿದ್ದಾರೆ.
ಮೊದಲ ರಾತ್ರಿಗೇ ರೆಡ್ಡಿ ಜೋಡಿ ಜೈಲು ವಾತಾವರಣದಿಂದ ಕಂಗೆಟ್ಟವರಂತೆ ಕಂಡಿದ್ದಾರೆ. ಸಾದಾ ಕೋಣೆಯಲ್ಲಿ ಪವಡಿಸಿದ್ದಾರೆ. ಅವರಿಗೆ ವಿಶೇಷ ಸವಲತ್ತು ಕೊಟ್ಟಿಲ್ಲ ಎಂದು ಎಂದು ಜೈಲು ಮೂಲುಗಳು ತಿಳಿಸಿವೆ.
ಕುತೂಹಲಕಾರಿ ಸಂಗತಿಯೆಂದರೆ ರೆಡ್ಡಿ ಜೋಡಿಗೆ ಸಾಥ್ ನೀಡಲು ಭಾರಿ ಕುಳವೊಂದು ವರ್ಷಾನುಗಟ್ಟಲೆಯಿಂದ ಜೈಲಿನಲ್ಲಿ ಕೊಳೆಯುತ್ತಿದೆ. ಯಸ್, ಸಾವಿರಾರು ಕೋಟಿ ರೂ. ವಂಚನೆ ಆರೋಪಿ ಸತ್ಯಂ ಕಂಪ್ಯೂಟರ್ಸಿನ ರಾಮಲಿಂಗರಾಜು ಇದೇ ಜೈಲಿನಲ್ಲಿದ್ದಾನೆ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications