ಯಡಿಯೂರಪ್ಪ ತಲೆ ಬೋಳಿಸಿಕೊಂಡು ಮನೆಗೆ ಹೋಗಲಿ

siddaramaiah-admonishes-bsy-to-get-tonsured
ಬೆಂಗಳೂರು, ಆಗಸ್ಟ್ 31: ಮೊನ್ನೆ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಜನರಿಂದ ಶೇಮ್...ಶೇಮ್ ಅನಿಸಿಕೊಂಡ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ತಲೆ ಬೋಳಿಸಿಕೊಂಡು ಮನೆಗೆ ಹೋಗುವುದು ಸೂಕ್ತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಾರಬ್ ನಗರದಲ್ಲಿ ಕೆಪಿಸಿಸಿ ಸದಸ್ಯ ಬಿ. ಗುರಪ್ಪ ನಾಯ್ಡು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ 2000 ಆಹಾರ ಧಾನ್ಯಗಳ ಬ್ಯಾಗ್‌ನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯವನ್ನು ಲೂಟಿ ಮಾಡಿದ ಯಡಿಯೂರಪ್ಪ ನ್ಯಾಯಾಲಯದ ಕಟಕಟೆ ಏರಿದ್ದು, ಜನರಿಂದಲೂ ಥೂ...ಛೀ ಎನಿಸಿಕೊಂಡಿದ್ದಾರೆ. ಅವರು ತಮ್ಮ ತಲೆ ಬೋಳಿಸಿ ಮನೆಗೆ ಹೋಗುವುದು ಸೂಕ್ತ ಎಂದ ಸಿದ್ದರಾಮಯ್ಯ, ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಲೋಕಾಯುಕ್ತರ ಗಣಿ ವರದಿಯ ಶಿಫಾರಸನ್ನು ಜಾರಿಗೊಳಿಸುವವರೆಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದ ಅವರು, ಯಡಿಯೂರಪ್ಪರ ಕೈಗೊಂಬೆಯಾಗಿರುವ ಸಿಎಂ ಸದಾನಂದ ಗೌಡರಿಗೆ ಕೇವಲ ಹಲ್ಲು ಬಿಟ್ಟು ನಗುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+