ಲೋಕಾಯುಕ್ತ ಪಾಟೀಲರ ಮಗ ಶ್ರೀರಾಮುಲು ಪರ ವಕೀಲ

2007 ರಿಂದಲೂ ರೆಡ್ಡಿ ಸಹೋದರರ ಪರವಾಗಿ ರಾಜ್ಯ ಹೈಕೋರ್ಟಿನಲ್ಲಿ ವಾದಿಸುತ್ತಿದ್ದಾರೆ. ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಸಲ್ಲಿಸಿದ ಅಕ್ರಮ ಗಣಿಗಾರಿಕೆ ಕುರಿತ ಎರಡನೇ ವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪಿಸಲಾಗಿತ್ತು.
ಬಸವಪ್ರಭು ಪಾಟೀಲ್ ಸುಪ್ರೀಂ ಮತ್ತು ಹೈಕೋರ್ಟಿನ ಎ ದರ್ಜೆ ವಕೀಲರಾಗಿದ್ದಾರೆ. ಅವರು ಕರ್ನಾಟಕ ಹೈಕೋರ್ಟಿನಲ್ಲಿ ಜನಾರ್ದನ ರೆಡ್ಡಿ , ಅವರ ಸಹೋದರ ಕರುಣಾಕರ ರೆಡ್ಡಿ ಮತ್ತು ಆಪ್ತ ಶ್ರೀರಾಮುಲು ಪರವಾಗಿ ವಾದಿಸುತ್ತಿದ್ದಾರೆ.
ಯಾವ ಕೇಸು?: ಜನಾರ್ದನ ರೆಡ್ಡಿಯ ವಿರುದ್ಧ ದಾಖಲಾಗಿರುವ ಅರಣ್ಯ ಲೂಟಿ ಕೇಸು (ಸಿಆರ್ಎಲ್ಪಿ 3775/2007), ಕರುಣಾಕರ ರೆಡ್ಡಿ ವಿರುದ್ಧ ಚುನಾವಣೆಗೆ ಸಂಬಂಧಿಸಿದ ಆಯ್ಕೆ ಅಮಾನ್ಯ' ಕೇಸು ಮತ್ತು ಶ್ರೀರಾಮುಲುವಿನ ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾದಿಸುತ್ತಿದ್ದಾರೆ.
ಅರಣ್ಯಾಧಿಕಾರಿ ರಾಜಶೇಖರನ್ಗೆ ಕೊಲೆ ಬೆದರಿಕೆಯೊಡಿದ್ದ ಬಗ್ಗೆ ಶ್ರಿ ರಾಮುಲು ವಿರುದ್ಧ ಹೈಕೋರ್ಟಿನಲ್ಲಿ ಕೇಸೊಂದು ದಾಖಲಾಗಿದೆ. ಈ ಎಲ್ಲ ಕೇಸುಗಳು 2007 ಆಸುಪಾಸಿನಲ್ಲಿ ದಾಖಲಾಗಿವೆ. ಇದನ್ನು ಹೊರತುಪಡಿಸಿ ಹೊಸ ಕೇಸುಗಳ ಬಗ್ಗೆ ಪಾಟೀಲ್ ವಾದಿಸುವುದಿಲ್ಲ ಎಂದಿದ್ದಾರೆ ಬಸವಪ್ರಭು ಪಾಟೀಲ್.
'ನಾನು ರೆಡ್ಡಿಗಳ ಪರವಾಗಿ ವಾದಿಸುತ್ತಿದ್ದೇನೆ. ಆದರೆ ಭವಿಷ್ಯದಲ್ಲಿ ಇಲ್ಲಿ ಹೊಸ ಕೇಸುಗಳನ್ನು ತೆಗೆದುಕೊಳ್ಳಲಾರೆ'' ಎಂದು ಬಸವಪ್ರಭು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಪಾಟೀಲ್ ಕುಟುಂಬ : ಶಿವರಾಜ್ ಪಾಟೀಲ್ ಅವರ ಹಿರಿಯ ಮಗ ಡಾ ಶರಣ್ ವಿ ಪಾಟೀಲ್ ಅವರು ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷರಾಗಿದ್ದು, ಶಾಮನೂರು ಶಿವಶಂಕರಪ್ಪ ಅವರ ಪುತ್ರಿಯನ್ನು ವರಿಸಿದ್ದಾರೆ.
ಕಿರಿಯ ಮಗ ಬಸವಪ್ರಭು ವಿ ಪಾಟೀಲ್ ಅವರು ಪಂಜಾಬ್ ಹಾಗೂ ಹಿಮಾಚಲದ ರಾಜ್ಯಪಾಲ, ಮಾಜಿ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಅವರ ಪುತ್ರಿ ಸಪ್ನಾ ಅವರನ್ನು ವಿವಾಹವಾಗಿದ್ದಾರೆ. ಸಪ್ನಾ ಅವರು 2002ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 15 ವರ್ಷದ ಪುತ್ರಿ ಹಾಗೂ 19 ವರ್ಷದ ಪುತ್ರನನ್ನು ಪಾಟೀಲ್ ಹೊಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications