ದೇವಿಕಾರಾಣಿ ಎಸ್ಟೇಟ್ ಸ್ವಾಧೀನ ಕಾಯ್ದೆ ಹಕೀಕತ್ತು ಏನು?
ಬೆಂಗಳೂರು,
ಆ.9: ರೋರಿಚ್ ದಂಪತಿಯ ಎಲ್ಲಾ ಸ್ಥಿರ ಮತ್ತು ಚರಾಸ್ತಿ ವಶಪಡಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ರೋರಿಚ್ ಮತ್ತು ದೇವಿಕಾರಾಣಿ ರೋರಿಚ್ ಎಸ್ಟೇಟ್ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ಅನ್ನು ಜಾರಿಗೆ ತಂದು ಆಸ್ತಿ ಸ್ವಾಧೀನ ಪಡಿಸಿಕೊಂಡಿತ್ತು. ಅರ್ಜಿದಾರರು ಕರ್ನಾಟಕ ಸರ್ಕಾರದ 1996ರ ಭೂಸ್ವಾಧೀನ ಕಾಯಿದೆಯ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದರು. id="toptextpromo">ರೋರಿಚ್
ದಂಪತಿಗಳು ಬೆಂಗಳೂರು ಸಮೀಪ ತಾತಗುಣಿ ಎಸ್ಟೇಟನ್ನು ಅಭಿವೃದ್ಧಿ ಪಡಿಸಿದ್ದರು. ಇಲ್ಲಿನ ಮನೆಯಲ್ಲಿ ಕಲಾವಿದ ರೋರಿಚ್ ರಚಿಸಿದ ಅಪೂರ್ವ ತೈಲಚಿತ್ರಗಳು ಹಾಗೂ ಇತರ ಅಪರೂಪದ ಕಲಾಕೃತಿಗಳಿವೆ. ಈ ಎಸ್ಟೇಟ್ನ ಭೂಮಿಯ ಸ್ವಲ್ಪ ಭಾಗವನ್ನು ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ ಕೆ.ಟಿ. ಪ್ಲಾಂಟೇಷನ್ನವರು ವಶಪಡಿಸಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ಅದಕ್ಕೆ ಅನುಮತಿ ನೀಡದೇ ಈ ಒಪ್ಪಂದದ ನೋಂದಣಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ತಾವು
ಖರೀದಿಸಿದ ಆಸ್ತಿಗೆ ಕರ್ನಾಟಕ ಭೂ ಸುಧಾರಣಾ ಕಾಯಿದೆ 1961 ಅನ್ವಯ ವಿನಾಯಿತಿ ನೀಡುವಂತೆ ಕೆ.ಟಿ. ಪ್ಲಾಂಟೇಷನ್ನವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರೋರಿಚ್ ಆಸ್ತಿ ಸ್ವಾಧೀನ ಮತ್ತು ಈ ಸಂಬಂಧ ರೂಪಿಸಲಾಗಿದ್ದ ಕಾಯಿದೆಯ ವ್ಯಾಪ್ತಿಯನ್ನು ಕೆ.ಟಿ. ಪ್ಲಾಂಟೇಷನ್ನವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.











Click it and Unblock the Notifications