ದೇವಿಕಾರಾಣಿ ಎಸ್ಟೇಟ್ ಸ್ವಾಧೀನ ಕಾಯ್ದೆ ಹಕೀಕತ್ತು ಏನು?

ರೋರಿಚ್ ದಂಪತಿಗಳು ಬೆಂಗಳೂರು ಸಮೀಪ ತಾತಗುಣಿ ಎಸ್ಟೇಟನ್ನು ಅಭಿವೃದ್ಧಿ ಪಡಿಸಿದ್ದರು. ಇಲ್ಲಿನ ಮನೆಯಲ್ಲಿ ಕಲಾವಿದ ರೋರಿಚ್ ರಚಿಸಿದ ಅಪೂರ್ವ ತೈಲಚಿತ್ರಗಳು ಹಾಗೂ ಇತರ ಅಪರೂಪದ ಕಲಾಕೃತಿಗಳಿವೆ. ಈ ಎಸ್ಟೇಟ್ನ ಭೂಮಿಯ ಸ್ವಲ್ಪ ಭಾಗವನ್ನು ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ ಕೆ.ಟಿ. ಪ್ಲಾಂಟೇಷನ್ನವರು ವಶಪಡಿಸಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ಅದಕ್ಕೆ ಅನುಮತಿ ನೀಡದೇ ಈ ಒಪ್ಪಂದದ ನೋಂದಣಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.
ತಾವು ಖರೀದಿಸಿದ ಆಸ್ತಿಗೆ ಕರ್ನಾಟಕ ಭೂ ಸುಧಾರಣಾ ಕಾಯಿದೆ 1961 ಅನ್ವಯ ವಿನಾಯಿತಿ ನೀಡುವಂತೆ ಕೆ.ಟಿ. ಪ್ಲಾಂಟೇಷನ್ನವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರೋರಿಚ್ ಆಸ್ತಿ ಸ್ವಾಧೀನ ಮತ್ತು ಈ ಸಂಬಂಧ ರೂಪಿಸಲಾಗಿದ್ದ ಕಾಯಿದೆಯ ವ್ಯಾಪ್ತಿಯನ್ನು ಕೆ.ಟಿ. ಪ್ಲಾಂಟೇಷನ್ನವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.











Click it and Unblock the Notifications