ಭ್ರಷ್ಟರ ವಿರುದ್ಧ ಕೇಸ್ ಜಡಿದ ಹೊಸ ಲೋಕಾಯುಕ್ತ
ದೊಡ್ಡಬಳ್ಳಾಪುರ, ಆನೇಕಲ್, ದೇವನಹಳ್ಳಿ, ಹೊಸಕೋಟೆ, ಜಿಗಣಿ ಹಾಗೂ ನೆಲಮಂಗಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಶಿರಾಜ್ ಪಾಟೀಲ್ ತಂಡದ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದೆ. ಸುಮಾರು 10ಕ್ಕೂ ಅಧಿಕ ದಲ್ಲಾಳಿಗಳ ಮೇಲೆ ಸ್ವಯಂಪ್ರೇರಿತರಾಗಿ(suo moto) ಪ್ರಕರಣವನ್ನು ದಾಖಲಿಸಲಾಗಿದೆ.
ನೆಲಮಂಗಲದ ದಲ್ಲಾಳಿಯಿಂದ 46 ಸಾವಿರ ರು, ಹೊಸ ಕೋಟೆ ಎಸ್ ಡಿಎ ವಿಶ್ವನಾಥ ಬಳಿ ಇದ್ದ 11,450 ರು, ಸಬ್ ರಿಜಿಸ್ಟ್ರರ್ ಪಾಪಣ್ಣ ಬಳಿ ಇದ್ದ ಹೆಚ್ಚುವರಿ ಹಣ 15,260 ರು ಅನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಪ್ರಸನ್ನ ರಾಜು ನೇತೃತ್ವದ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಕೆಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬ್ರೋಕರ್ ಗಳು, ಸಬ್ ರಿಜಿಸ್ಟ್ರಾರ್ ಗಳು, ಎಸ್ ಡಿಎ, ಎಫ್ ಡಿಎಗಳು ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಉಪ ನೋಂದಣಿ ಕಚೇರಿಗಳಲ್ಲಿ ಆನ್ ಲೈನ್ ನೋಂದಣಿ, ಸಿಸಿ ಕೆಮೆರಾ ಅಳವಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ಶಿವರಾಜ್ ಪಾಟೀಲ್ ಹೇಳಿದ್ದಾರೆ.