ರೆಡ್ಡಿ ತ್ರಯರ ವಾದವೇನು? ನಿಷ್ಠರಿಗಾದರೂ ಸಚಿವ ಸ್ಥಾನ ನೀಡಿ!

 Reddy brothers press pacic button at BJP High Command
ಬೆಂಗಳೂರು, ಆಗಸ್ಟ್ 9: ಲೋಕಾಯುಕ್ತ 'ಗಣಿಗಾರಿಕೆ' ವರದಿ ಫಲಶೃತಿಯಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತೊರೆದಂತೆ ತಾವೇಕೆ ಮಂತ್ರಿ ಸ್ಥಾನದಿಂದ ವಂಚಿತರಾಗಬೇಕು ಎಂಬ ನಿಲುವಿಗೆ ಬಂದಿರುವ ಬಳ್ಳಾರಿ ಗಣಿ ಧಣಿಗಳು, ನೂತನ ಸಂಪುಟಕ್ಕೆ ಸೇರ್ಪಡೆಯಾಗಲು ಹರಸಾಹಸ ಪಟ್ಟಿದ್ದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸಿದ್ದೇವೆ. ಹೀಗಾಗಿ ಮಂತ್ರಿಗಳಾಗಿ ಮುಂದುವರಿಯುವ ಹಕ್ಕಿದೆ ಎಂದು ವಾದಿಸುತ್ತಿರುವ ಗಣಿ ರೆಡ್ಡಿಗಳು ಇದೇ ಕಾರಣಕ್ಕಾಗಿಯೇ ಕೊನೆಯ ಕ್ಷಣದಲ್ಲಿ ಯಡಿಯೂರಪ್ಪ ಬಣ ತೊರೆದು ಅನಂತಕುಮಾರ್ ಬಣ ಸೇರಿದ್ದರು.

ತಮ್ಮ ಬೆನ್ನಿಗೆ ಸುಮಾರು 8ರಿಂದ 10 ಶಾಸಕರನ್ನು ಹೊಂದಿರುವ ಗಣಿ ರೆಡ್ಡಿಗಳು, ಸರ್ಕಾರದ ಮಟ್ಟಿಗೆ ತಾವೇ ನಿರ್ಣಾಯಕರು ಎಂಬ ನಿಲವಿಗೆ ಬಂದಿದ್ದಾರೆ. ಆದರೆ, ಗಣಿ ರೆಡ್ಡಿಗಳ ಸಂಪುಟ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರಿಗೂ ಒಲವಿಲ್ಲ ಎನ್ನಲಾಗಿದೆ. ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾಗಬಹುದಾದ ಟೀಕೆಗಳ ಜತೆಗೆ ನೈತಿಕವಾಗಿಯೂ ರೆಡ್ಡಿಗಳಿಗೆ ಮಂತ್ರಿ ಸ್ಥಾನ ನೀಡುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಗಣಿ ರೆಡ್ಡಿಗಳ ಮುಂದುವರಿಕೆಗೆ ಬಿಜೆಪಿ ಹೈಕಮಾಂಡ್‌ ಕೂಡ ಒಪ್ಪುವ ಸಾಧ್ಯತೆ ತೀರಾ ಕಡಮೆ ಎಂಬ ಮಾಹಿತಿ ದೊರೆತಿದೆ.

ಲೋಕಾಯುಕ್ತರ ವರದಿಯಲ್ಲಿ ಹೆಸರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆ ಸಾಧ್ಯವಾಗದಿದ್ದರೆ ತಮ್ಮ ಪರವಾಗಿ ಇಬ್ಬರು ಅಥವಾ ಮೂವರನ್ನು ಸಂಪುಟಕ್ಕೆ ಸೇರಿಸಲು ಗಣಿ ರೆಡ್ಡಿಗಳು ಮುಂದಾಗಿದ್ದಾರೆ. ಹೈಕಮಾಂಡ್ ಮುಂದೆ ಸೋಮವಾರ ಮತ್ತು ಮಂಗಳವಾರ ಕೊನೆಯ ಕ್ಷಣದವರೆಗೂ ಪ್ರಯತ್ನಿಸಿ ತಮಗೆ ಅವಕಾಶ ನಿರಾಕರಿಸಲ್ಪಟ್ಟಲ್ಲಿ ಆಗ ತಮ್ಮ ನಿಷ್ಠಾವಂತ ಬೆಂಬಲಿಗರಾದ ವಿಧಾನಸಭಾ ಸದಸ್ಯ ಎಂ.ಎಸ್‌. ಸೋಮಲಿಂಗಪ್ಪ ಹಾಗೂ ವಿಧಾನಪರಿಷತ್ತಿನ ಸದಸ್ಯ ಮೃತ್ಯುಂಜಯ ಜಿನಗಾ ಅವರನ್ನು ಮಂತ್ರಿಗಳನ್ನಾಗಿ ಮಾಡುವ ಬೇಡಿಕೆಯಿಡುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+