ಬಳ್ಳಾರಿ ಗಣಿಗಾರಿಕೆ ನಿಷೇಧ ಉಕ್ಕು ಉತ್ಪಾದನೆಗೆ ತೊಡಕು

ದೇಶದ ಒಟ್ಟು ಉಕ್ಕು ಉತ್ಪಾದನೆಯಲ್ಲಿ ಶೇ.21 ರಷ್ಟು ಪಾಲು ಹೊಂದಿರುವ ಜೆಎಸ್ಡ್ಬ್ಲಯೂ ಸ್ಟೀಲ್ ಹಾಗೂ ಕಲ್ಯಾಣಿ ಸ್ಟೀಲ್ಸ್ ಕಂಪೆನಿಗಳಿಗೆ ತೀವ್ರ ಹಿನ್ನಡೆ ಆಗಿದ್ದು ಇವೆರಡೂ ಕಂಪೆನಿಗಳು ವಾರ್ಷಿಕ 14 ಮಿಲಿಯನ್ ಟನ್ ಗಳಷ್ಟು ಉಕ್ಕು ಉತ್ಪಾದಿಸುತ್ತಿವೆ.
ಬಳ್ಳಾರಿ ಹಾಗೂ ಹೊಸಪೇಟೆ ಪ್ರಾಂತ್ಯದ ಉಕ್ಕು ತಯಾರಿಕಾ ಕಂಪೆನಿಗಳು ದೇಶದ ಉಕ್ಕು ಉತ್ಪಾದನೆಯಲ್ಲಿ ಶೇ.25 ರಷ್ಟು ಪಾಲು ಹೊಂದಿದ್ದು ತೀರ್ಪಿನ ಹಿನ್ನೆಲೆಯಲ್ಲಿ ಇತರ ಪ್ರದೇಶಗಳಿಂದ ಅದಿರನ್ನು ಪಡೆಯಲು ಮುಂದಾಗಿವೆ.
ರಾಜ್ಯ ದೇಶದ ಉಕ್ಕು ಉತ್ಪಾದನೆಯಲ್ಲಿ 5ನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದು ದೇಶದಲ್ಲಿ ಒಟ್ಟು ವಾರ್ಷಿಕ 218 ಮಿಲಿಯನ್ ಟನ್ ಗಳಷ್ಟು ಉಕ್ಕನ್ನು ಉತ್ಪಾದಿಸಲಾಗುತ್ತಿದೆ. ದಕ್ಷಿಣ ಭಾsರತದ ಶೇ.80 ರಷ್ಟು ಖನಿಜ ಉತ್ಪಾದನೆಯಲ್ಲಿ ಬಳ್ಳಾರಿ ಹೊಸಪೇಟೆ ಯ ಪಾಲು 45 ಮಿಲಿಯನ್ ಟನ್ ಗಳಷ್ಟಾಗಿದೆ.
ಇದರಲ್ಲಿ 25 ಮಿಲಿಯನ್ ಟನ್ ಗಳಷ್ಟು ಅದಿರನ್ನು ಬಳ್ಳಾರಿಯ ವಿಜಯನಗರ, ಜೆಎಸ್ಡಬ್ಲ್ಯೂ, ಕಲ್ಯಾಣಿ ಕಂಪೆನಿಗಳು ಬಳಸುತ್ತಿದೆ. ಇವುಗಳ ನಾಲ್ಕು ಉತ್ಪಾದನಾ ಘಟಕಗಳು ವಾರ್ಷಿಕ 14 ಮಿಲಿಯನ್ ಟನ್ ಗಳಷ್ಟು ಉಕ್ಕನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ 25 ಮಿಲಿಯನ್ ಟನ್ ಗಳಷ್ಟು ಅದಿರನ್ನು ಬಳಸಿಕೊಳ್ಳುತ್ತಿವೆ.
ಜೆಎಸ್ಡ್ಲ್ಯೂ ತನ್ನ ವಿಜಯನಗರ ಘಟಕಕ್ಕೆ ಶೇ 50 ರಷ್ಟು ಅದಿರನ್ನು ಬಳ್ಳಾರಿಯಿಂದ, ಶೇ 30ರಷ್ಟನ್ನು ಚಿತ್ರದುರ್ಗದಿಂದ ಹಾಗೂ ಶೇ 20 ರಷ್ಟನ್ನು ಹೊರರಾಜ್ಯದಿಂದ ಖರೀದಿಸುತ್ತಿದೆ. ವಿಜಯನಗರ ಘಟಕ ಜೆಎಸ್ಡ್ಲ್ಯೂ ಸ್ಟೀಲ್ ನ ಶೇ 70 ರಷ್ಟು ಉಕ್ಕು ಉತ್ಪಾದನೆಯನ್ನು ಹೊಂದಿದ್ದು ನಿಷೇಧದಿಂದ ತೀವ್ರ ತೊಂದರೆಗೀಡಾಗಿದ್ದು ಇದೀಗ ಚತ್ತೀಸ್ ಘಡ, ಗೋವ, ಬಿಹಾರದಿಂದ ಅದಿರು ಪಡೆಯಲು ಮುಂದಾಗಿದೆ.
ನಿಷೇಧದಿಂದ ಶಾತವಾಹನ ಇಸ್ಪಾತ್, ಕಿರ್ಲೋಸ್ಕರ್ ಫೆರ್ರೋಸ್, ಉನಿಮೆಟಲ್ ಇಸ್ಪಾತ್, ಸಂಡೂರ್ ಮ್ಯಾಂಗನೀಸ್ ಅಂಡ್ ಐರನ್ ಓರ್ ,ಹಾಗೂ ಸಂಡೂರ್ ಲ್ಯಾಮಿನೇಟ್ಸ್ ಗಳಿಗೂ ತೊಂದರೆ ಆಗಿದೆ.
ಕಲ್ಯಾಣಿ ಸ್ಟೀಲ್ಸ್ ತನ್ನ ಉತ್ಪಾದನೆಯನ್ನು ಟಾಟಾ ಮೋಟಾರ್ಸ್, ಮಹೀಂದ್ರಾ ಹಾಗೂ ಮಾರುತಿ ಸುಜುಕಿ ಕಂಪೆನಿಗಳಿಗೆ ಸರಬರಾಜು ಮಾಡುತ್ತಿದೆ. ಈ ನಿಷೇಧದಿಂದ ದೇಶದಲ್ಲಿ ಕಬ್ಬಿಣದ ಅದಿರಿನ ದರ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications