For Daily Alerts
ರವಿಶಂಕರ್ ಗುರೂಜಿ ಸಲಹೆಗೆ ಗುರ್ ಎಂದ ಶೆಟ್ಟರ್ ಬಣ
ಡಿವಿ ಸದಾನಂದ ಗೌಡರ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿ, ಭಿನ್ನಮತವನ್ನು ಕೈಬಿಡುವಂತೆ ರವಿಶಂಕರ್ ಗುರೂಜಿ ಮನವಿ ಮಾಡಿದ್ದರು. ಆದರೆ, ಗುರೂಜಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್ ಬಣ, ಗುರೂಜಿ ಮೊದಲು ತಮ್ಮ ಮೇಲಿರುವ ಭೂ ಒತ್ತುವರಿ ಆರೋಪವನ್ನು ಬಗೆ ಹರಿಸಿಕೊಳ್ಳಲ್ಲಿ, ಎಲ್ಲರೂ ರಾಜಕೀಯ ಸಂಧಾನಕ್ಕೆ ಇಳಿದರೆ ಅಷ್ಟೇ ಗತಿ. ಗುರೂಜಿ ಉಪದೇಶ ನಮಗೆ ಬೇಕಿಲ್ಲ. ಯಾವ ಸಂಧಾನಕ್ಕೂ ಸಿದ್ಧವಿಲ್ಲ ಎಂದಿದ್ದರು.
ಇದಕ್ಕೂ ಮುನ್ನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ ಹಾಗೂ ರೇಣುಕಾಚಾರ್ಯ ಅವರು ಮಹತ್ವದ ಮಾತುಕತೆ ನಡೆಸಿದ್ದರು. ಆಶ್ರಮ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರವಿಶಂಕರ್ ಗುರೂಜಿ ಅವರ ಬೋಧನೆ ಸರ್ಕಾರಕ್ಕೆ ಅಗತ್ಯವಿದೆ. 3-4 ದಿನಗಳಲ್ಲಿ ಬಿಕ್ಕಟ್ಟು ಸರಿ ಹೋಗಲಿದೆ. ಸಚಿವ ಸಂಪುಟ ರಚನೆ ಹೈಕಮಾಂಡ್ ಸೂಚನೆಯಂತೆ ನಡೆಯಲಿದೆ. ನಾನು ಯಾವುದೆ ಒತ್ತಡ ಹೇರುತ್ತಿಲ್ಲ ಎಂದು ಸ್ಪಷ್ಪಪಡಿಸಿದರು.
ಬಿಜೆಪಿ ಬಿಕ್ಕಟ್ಟು ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಜಗದೀಶ್ ಶೆಟ್ಟರ್ ravishankar guruji art of living jagadish shettar bjp crisis bangalore
English summary
Karnataka BJP Government Crisis: BJP dissidence leaders of Shettar gang have opposed interference of Art of Living fame Ravishankar Guruji in political matter. Ravishankar Guruji tried to advise followers of Shettar not quarrel and support DV Sadananda government.
Story first published: Friday, August 5, 2011, 13:33 [IST]