ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಹೈಕಮಾಂಡ್ ಪಾಪಕ್ಕೆ ಬಲಿಯಾದ ಯಡಿಯೂರಪ್ಪ
'ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊರಬೇಕಾಗಿರುವುದು ಬಿಜೆಪಿ ಹೈಕಮಾಂಡ್. ಅಕ್ರಮ ಗಣಿಗಾರಿಕೆ ಹೆಸರಲ್ಲಿ ನಡೆದಿರುವ ಎಲ್ಲ ಅಕ್ರಮಗಳ ನಿಜವಾದ ಫಲಾನುಭವಿಗಳು ಆ ಪಕ್ಷದ ವರಿಷ್ಠರು' ಎಂದು ಹರಿಪ್ರಸಾದ್ ಗುಡುಗಿದ್ದಾರೆ.
'ಬಿಜೆಪಿ ಹೈಕಮಾಂಡ್ ಕೂಡಾ ಅಕ್ರಮ ಗಣಿಗಾರಿಕೆ ಫಲಾನುಭವಿಗಳಾಗಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು' ಎಂದೂ ಅವರು ಸಲಹೆ ಮಾಡಿದರು.
'ಎರಡು ವರ್ಷಗಳ ಹಿಂದೆಯೇ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಅವ್ಯವಹಾರದಲ್ಲಿ ಭಾಗಿಯಾಗಿದ್ದ ಭ್ರಷ್ಟ ಅಧಿಕಾರಿಗಳನ್ನು ಬಳ್ಳಾರಿ ಜಿಲ್ಲೆಯಿಂದ ವರ್ಗ ಮಾಡಿದ್ದರು. ಆದರೆ, ಬಳ್ಳಾರಿ ರೆಡ್ಡಿಗಳು ತಿರುಗಿ ಬಿದ್ದರು. ಬಿಜೆಪಿ ಹೈಕಮಾಂಡ್ ಗಣಿ ಧಣಿಗಳ ಪರ ನಿಂತಿತು. ಮುಖ್ಯಮಂತ್ರಿ ಕೈ ಕಟ್ಟಿಹಾಕಿತು' ಎಂದು ರಾಜ್ಯಸಭೆ ಮಾಜಿ ಸದಸ್ಯರೂ ಆದ ಹರಿಪ್ರಸಾದ್ ವ್ಯಾಖ್ಯಾನ ಮಾಡಿದ್ದಾರೆ.
Comments
ಅಕ್ರಮ ಗಣಿಗಾರಿಕೆ ಜ್ಯೋತಿಷ್ಯ ಬಿಕೆ ಹರಿಪ್ರಸಾದ್ ರಾಜೀನಾಮೆ ಯಡಿಯೂರಪ್ಪ ಲೋಕಾಯುಕ್ತ illegal mining lokayukta resignation astrology
English summary
BJP High command mounted pressure on BSY and forced him to resign, just Yeddyurappa became scape goat says Congress leader BK Hari Prasad.
Story first published: Monday, August 1, 2011, 7:57 [IST]