ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹೈಕಮಾಂಡ್ ಪಾಪಕ್ಕೆ ಬಲಿಯಾದ ಯಡಿಯೂರಪ್ಪ

By Srinath
|
Google Oneindia Kannada News

BK Hari Prasad
ನವದೆಹಲಿ, ಆಗಸ್ಟ್ 01: 'ಅಕ್ರಮ ಗಣಿಗಾರಿಕೆ ಆರೋಪಕ್ಕೆ ಬಿ.ಎಸ್. ಯಡಿಯೂರಪ್ಪ ಹರಕೆ ಕುರಿಯಾದರು. ಬಿಜೆಪಿ ಹೈ ಕಮಾಂಡ್ ಪಾಪಕ್ಕೆ ಅವರು ಬಲಿಯಾದರು' ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

'ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊರಬೇಕಾಗಿರುವುದು ಬಿಜೆಪಿ ಹೈಕಮಾಂಡ್. ಅಕ್ರಮ ಗಣಿಗಾರಿಕೆ ಹೆಸರಲ್ಲಿ ನಡೆದಿರುವ ಎಲ್ಲ ಅಕ್ರಮಗಳ ನಿಜವಾದ ಫಲಾನುಭವಿಗಳು ಆ ಪಕ್ಷದ ವರಿಷ್ಠರು' ಎಂದು ಹರಿಪ್ರಸಾದ್ ಗುಡುಗಿದ್ದಾರೆ.

'ಬಿಜೆಪಿ ಹೈಕಮಾಂಡ್ ಕೂಡಾ ಅಕ್ರಮ ಗಣಿಗಾರಿಕೆ ಫಲಾನುಭವಿಗಳಾಗಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು' ಎಂದೂ ಅವರು ಸಲಹೆ ಮಾಡಿದರು.

'ಎರಡು ವರ್ಷಗಳ ಹಿಂದೆಯೇ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಅವ್ಯವಹಾರದಲ್ಲಿ ಭಾಗಿಯಾಗಿದ್ದ ಭ್ರಷ್ಟ ಅಧಿಕಾರಿಗಳನ್ನು ಬಳ್ಳಾರಿ ಜಿಲ್ಲೆಯಿಂದ ವರ್ಗ ಮಾಡಿದ್ದರು. ಆದರೆ, ಬಳ್ಳಾರಿ ರೆಡ್ಡಿಗಳು ತಿರುಗಿ ಬಿದ್ದರು. ಬಿಜೆಪಿ ಹೈಕಮಾಂಡ್ ಗಣಿ ಧಣಿಗಳ ಪರ ನಿಂತಿತು. ಮುಖ್ಯಮಂತ್ರಿ ಕೈ ಕಟ್ಟಿಹಾಕಿತು' ಎಂದು ರಾಜ್ಯಸಭೆ ಮಾಜಿ ಸದಸ್ಯರೂ ಆದ ಹರಿಪ್ರಸಾದ್ ವ್ಯಾಖ್ಯಾನ ಮಾಡಿದ್ದಾರೆ.

English summary
BJP High command mounted pressure on BSY and forced him to resign, just Yeddyurappa became scape goat says Congress leader BK Hari Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X