ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

215 ಕೋಟಿ ತೆರಿಗೆ ವಂಚಿಸಿದ ಬಳ್ಳಾರಿ ಗಣಿಧಣಿಗಳು

By Mahesh
|
Google Oneindia Kannada News

Bellary Reddy Brothers | Rs 215 cr Stashed In Tax
ಬೆಂಗಳೂರು ಜು 29: ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಸುಮಾರು 16,085 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಆದರೆ ಈ ಹಣ ಸ್ವಿಸ್ ಬ್ಯಾಂಕ್ ಅಥವಾ ತೆರಿಗೆ ವಂಚಕರಿಗೆ ಧಾರಾಳ ಅವಕಾಶವಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡುಗಳಲ್ಲಿ ಹೂಡಿಕೆಯಾಗಿರುವ ಸಂದೇಶ ನಿಜವಾಗುತ್ತಿದೆ. ಬಳ್ಳಾರಿ ರೆಡ್ಡಿ ಸೋದರರು ಹೊಸಪೇಟೆಯ ವಿಕಾಸ್ ಸೌಹಾರ್ದ ಬ್ಯಾಂಕ್ ಅನ್ನು ಕರ್ನಾಟಕದ ಸ್ವಿಸ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಜೊತೆಗೆ ವಿದೇಶಿ ಬ್ಯಾಂಕುಗಳಲ್ಲಿ ಗಣಿಧಣಿಗಳ ಹಣ ಹೂಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ.

ತೆರಿಗೆ ವಂಚನೆ: ಲೋಕಾಯುಕ್ತ ವರದಿ ಪ್ರಕಾರ, ಬಳ್ಳಾರಿ ರೆಡ್ಡಿ ಸೋದರರು ಮತ್ತು ಶ್ರೀರಾಮುಲು ತಮ್ಮ ಅಕ್ರಮ ಗಣಿಗಾರಿಕೆ ಮೂಲಕ 215.12 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ.

ಓಬಳಾಪುರಂ ಗಣಿ ಕಂಪೆನಿ ಜತೆಗೆ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ರೆಡ್ಡಿ ಸೋದರರು ರಾಜ್ಯದಲ್ಲಿ ಗಣಿ ಕಂಪನಿ ನಡೆಸುತ್ತಿದ್ದಾರೆ. ಡಾ ಯು ವಿ ಸಿಂಗ್ ನೇತೃತ್ವದ ತಂಡ ನೀಡಿರುವ ವರದಿಯಂತೆ ಚೀನಾ ಹಾಗೂ ಸಿಂಗಾಪುರಕ್ಕೆ ನಿರಂತರವಾಗಿ ಅದಿರು ರಫ್ತು ಮಾಡಲಾಗಿದೆ.

ಓಬಳಾಪುರಂ ಗಣಿ ಈ ಬಗ್ಗೆ ದಾಖಲೆಗಳು ಬರಬೇಕಾದ ರಾಯಧನ ನಯಾಪೈಸವೂ ಬಂದಿಲ್ಲ. ಜಿಎಲ್‌ಎ 2007ರ ನವಂಬರ್ 27ರಂದು ಸ್ಥಾಪನೆಗೊಂಡಿದೆ. ಇದರ ನಿರ್ದೇಶಕರ ಮಂಡಳಿಯಲ್ಲಿ
ಜನಾರ್ದನ ರೆಡ್ಡಿಯೂ ಇದ್ದಾರೆ. ಜಿಎಲ್‌ಎ ಕಂಪೆನಿಯು ಸಿಂಗಾಪುರ, ದುಬೈ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡುಗಳಲ್ಲಿ ತನ್ನ ವಹಿವಾಟು ನಡೆಸುತ್ತ ಬಂದಿದೆ.

English summary
Janardhan Reddy has allegedly stashed a whopping Rs 215 crore rupees in British Virgin Islands that is considered as a tax haven. Lokayukta has also sought a probe by the RBI and Central government to look into the massive haul stashed by the Reddy Brothers abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X