ಗುಂಡು ಸಚಿವ ರೇಣುಕಾಚಾರ್ಯ ಮುಳಮುಳನೆ ಅತ್ತ ಪ್ರಸಂಗ

Excise Minister Renuka Charya weeps
ಬೆಂಗಳೂರು, ಜುಲೈ 29: ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಮುನ್ನಾ ಸಂದರ್ಭದಲ್ಲಿ ವೋಟ್ ಆಫ್ ಥ್ಯಾಂಕ್ಸ್ ಹೇಳುವಾಗ ಗಳಗಳನೆ ಅತ್ತ ತಮ್ಮ ಪರಮಾಪ್ತ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು 'ಇದೇಕೆ ಕಣ್ಣೀರ ಧಾರೆ...' ಎಂದು ಯಡಿಯೂರಪ್ಪ ಅವರು ಸಂತೈಸಿದ ಆಸುಪಾಸಿನಲ್ಲೇ ಅಬಕಾರಿ ಸಚಿವ ರೇಣುಕಾ ಚಾರ್ಯ ಅವರೂ ಗೊಳೋ ಎಂದು ಅತ್ತಿದ್ದಾರೆ.

'ಯಡಿಯೂರಪ್ಪ ಇನ್ನು ಮುಖ್ಯಮಂತ್ರಿಯಾಗಿ ಉಳಿಯಲಾರರು' ಎಂಬ ವಿಷಯ ಖಚಿತವಾಗುತ್ತಿದ್ದಂತೆ ನರ್ಸ್ ರೇಣುಕಾಚಾರ್ಯ ಅವರಿಗೆ ಉಮ್ಮಳಿಸಿ ಬಂದ ದುಃಖ ತಡೆಯಲಾಗಿಲ್ಲ. ಗುರುವಾರ ಮುಖ್ಯಮಂತ್ರಿಗೆ ಆನಿಕೊಂಡೇ ಇದ್ದ ರೇಣುಕಾಚಾರ್ಯ, ರೇಸ್ ಕೋರ್ಸ್ ರಸ್ತೆಯ ಮನೆಯಿಂದ ಹೊರಬಂದವರೇ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದರು. ಅಷ್ಟೊತ್ತಿಗೆ ಅವರ ಕಣ್ಣು ಜಿನುಗುತ್ತಿತ್ತು.

ಒತ್ತರಿಸಿಕೊಂಡ ಬಂದ ದುಃಖ ತಡೆಯಲಾಗದೆ ಅಳತೊಡಗಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಯತ್ನಿಸಿದರು. ಉಹುಂ, ಸೂತಕದ ಛಾಯೆ ಅವರನ್ನು ಆವರಿಸಿತ್ತು. ಎಲ್ಲಾದರೂ ದೂರ ಹೋಗಿ ಒಬ್ಬಂಟಿಯಾಗಿ ಮನಸಾರೆ ಅಳಬೇಕು ಎನಿಸಿರಬೇಕು... ಕ್ಯಾಮರಾಗಳ ಕಣ್ಣು ತಪ್ಪಿಸಿ, ಹೊರಟೇ ಬಿಟ್ಟರು. ಇದನ್ನು ಟಿವಿಯಲ್ಲಿ ಕಣ್ಣಾರೆ ನೋಡಿ ಜಯಲಕ್ಷ್ಮಿ ಎಂಬ ಮಾಜಿ ನರ್ಸ್ ಒಂದು ಪೆಗ್ ಏರಿಸಿದರಂತೆ ಎಂಬುದು ಶುದ್ಧ ಕುಹಕ.

ಇದುವರೆಗೆ, ಯಡಿಯೂರಪ್ಪ ಪದತ್ಯಾಗದ ಹಿನ್ನೆಲೆಯಲ್ಲಿ ಅತ್ತವರ ಪಟ್ಟಿ ಹೀಗಿದೆ: ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ಪ್ರೊ.ಎಸ್.ಆರ್.ಲೀಲಾ, ಸುನಿಲ್ ವಲ್ಯಾಪುರೆ, ರೇಣುಕಾಚಾರ್ಯ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+