ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾನ ದುಃಖಿಗಳು: ಗಳಗಳನೆ ಅತ್ತ ಮೇಡಂ ಶೋಭಾ

By Srinath
|
Google Oneindia Kannada News

shobha, yadiyurappa
ಬೆಂಗಳೂರು, ಜುಲೈ 29: 'ಇದೇಕೆ ಕಣ್ಣೀರ ಧಾರೆ ...' ಅಣ್ಣಾವ್ರು ವಿಪರೀತ ಜ್ಞಾಪಕಕ್ಕೆ ಬರುತ್ತಿದ್ದಾರೆ. ಏಕೆಂದರೆ ಅನು ದಿನವೂ ಸಡಗರ, ಸಂಭ್ರಮದಲ್ಲಿ ಮುಳುಗೇಳುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲಿ ಈಗ ಮೌನ, ದುಃಖ ಮಡುಗಟ್ಟಿದೆ. ಪರಸ್ಪರ ಮುಖಗಳನ್ನು ನೋಡಿಕೊಂಡು ಕಣ್ಣೀರಿಡುವ ಅನಿವಾರ್ಯ, ಅಸಹಾಯಕ ಪರಿಸ್ಥತಿ ಮನೆ ಮಾಡಿದೆ.

ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವರಿಷ್ಠರು ಸೂಚನೆ ಕೊಟ್ಟ ಗಳಿಗೆಯೇ ಅಲ್ಲಿ ದುಃಖದ ಛಾಯೆ ಆವರಿಸಿತು. ಅಲ್ಲಿದ್ದ ಸಮಾನಮನಸ್ಕ ಸಚಿವರು, ಶಾಸಕರು ಒತ್ತಡದ ನಡುವೆ ಸಮಾನ ದುಃಖಿಗಳಾಗಿ, ಆಪ್ತರ ಜತೆ ಸಮಾಲೋಚನೆ ನಡೆಸಿದರು.

ಈ ಮಧ್ಯೆ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಏನಾಯಿತೆಂದರೆ... ಇಡೀ ದಿನ ರೇಸ್ ಕೋರ್ಸ್ ಮನೆಯಲ್ಲೇ ಕಾಲ ಕಳೆದ ಯಡಿಯೂರಪ್ಪ, ಮನೆಗೆ ಬಂದವರೆಲ್ಲರಿಗೂ ಹಸ್ತಲಾಘವ ಮಾಡಿ, ವೋಟ್ ಆಫ್ ಥ್ಯಾಂಕ್ಸ್ ಹೇಳುತ್ತಿದ್ದರು. ಇದನ್ನು ಕಣ್ಣಾರೆ ನೋಡಿದ ಮುಖ್ಯಮಂತ್ರಿಗಳ ಪರಮಾಪ್ತ ಸಚಿವೆ ಶೋಭಾ ಕರಂದ್ಲಾಜೆ ಗಳಗಳನೆ ಅತ್ತೇ ಬಿಟ್ಟರು.

ಇದನ್ನು ನೋಡಿ ಶಾಸಕರಾದ ಭಾರತಿ ಶೆಟ್ಟಿ, ಪ್ರೊ.ಎಸ್.ಆರ್.ಲೀಲಾ, ಸುನಿಲ್ ವಲ್ಯಾಪುರೆ ಮೊದಲಾದವರೂ ಒತ್ತರಿಸಿ ಬಂದ ದುಃಖ ತಡೆಯಲಾರದೆ ಕಣ್ಣೀರಿಟ್ಟರು. ಹಲವರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಭಾರದ ಹೃದಯ ಹೊತ್ತು ಅಲ್ಲಿಂದ ನಿರ್ಗಮಿಸಿದರು.

English summary
As Bjp High command mounts pressure on BSY, the close associate of B.S. Yeddyurappa, Minister Shobha Karandlaje weeps and wilts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X