ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕರೆಲ್ಲ ಅಶೋಕದಲ್ಲಿ, ಚಕ್ರವರ್ತಿ ಮಾತ್ರ ಮನೆಯಲ್ಲಿ

By Prasad
|
Google Oneindia Kannada News

BS Yeddyurappa
ಬೆಂಗಳೂರು, ಜು. 29 : ಹೊರಗಡೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಖತ್ ರೇಸ್ ನಡೆದಿದ್ದರೂ, ಶೋಭಾ ಕರಂದ್ಲಾಜೆಯೇ ಮುಖ್ಯಮಂತ್ರಿಯಾಗಬೇಕು ಎಂದು ಚಕ್ಕಂಬಕ್ಕಳ ಹಾಕಿಕೊಂಡು ರೇಸ್ ಕೋರ್ಸ್ ಮನೆಯಲ್ಲಿ ಕುಳಿತಿರುವ ಯಡಿಯೂರಪ್ಪನವರನ್ನು ಮನವೊಲಿಸಿ ರಾಜೀನಾಮೆ ಪಡೆಯಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ನಡೆಸಿದೆ.

ಯಡಿಯೂರಪ್ಪನವರನ್ನು ಕೆಳಗಿಳಿಸಲೇಬೇಕೆಂಬ ಕಠಿಣ ನಿರ್ಧಾರಕ್ಕೆ ಬಂದಿರುವ ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ಧರ್ಮೇಂದ್ರ ಪ್ರಧಾನ್ ಬಿಜೆಪಿ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಅಶೋಕ್ ಹೊಟೇಲ್ ನಲ್ಲಿ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಆರ್ ಅಶೋಕ್, ವಿಎಸ್ ಆಚಾರ್ಯ, ಸುರೇಶ್ ಕುಮಾರ್ ಮುಂತಾದವರ ಜೊತೆ ವರಿಷ್ಠರು ಮಾತುಕತೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮಾತ್ರ ಕರೆದರೆ ಮಾತ್ರ ಬರುತ್ತೇನೆ ಎಂಬ ಧೋರಣೆ ತಳೆದಿದ್ದಾರೆ.

ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರು ನಿರಪರಾಧಿ, ಅವರೇ ನಮ್ಮ ನಾಯಕ ಎಂಬೆಲ್ಲ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿರುವ ನಾಯಕರ ಮೇಲೆ ಬಿಜೆಪಿ ವರಿಷ್ಠರು ಕೆಂಡಾಮಂಡಲವಾಗಿದ್ದಾರೆ. ಕಗ್ಗಂಟು ಬಿಡಿಸುವವರೆಗೆ ಯಾರೂ ಯಾವರೀತಿಯ ಹೇಳಿಕೆಗಳನ್ನೂ ನೀಡಬಾರದು ಎಂದು ಆದೇಶಿಸಿದೆ.

ಇಷ್ಟೆಲ್ಲದರ ನಡುವೆ, ಹಿಟ್ ವಿಕೆಟ್ ಆಗಿದ್ದರೂ ತಾನೇ ಬ್ಯಾಟಿಂಗ್ ಮಾಡಬೇಕು, ಇಲ್ಲದಿದ್ದರೆ ಶೋಭಾಗೆ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಎಂದು ಯಡಿಯೂರಪ್ಪ ಕ್ಯಾತೆ ತೆಗೆದಿದ್ದಾರೆ. ಮೈದಾನಕ್ಕೆ ಇಳಿದಿರುವ ಅಂಪೈರ್ ಗಳು ಏನು ನಿರ್ಣಯ ನೀಡುತ್ತಾರೋ?

English summary
BJP national leaders Arun Jaitley, Rajnath Singh, Venkaiah Naidu, Dharmendra Pradhan hold parleys with state BJP leaders sans BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X