ಆದಾಯ ತೆರಿಗೆ ಪಾವತಿಗೆ ಈ ಬಾರಿಯೂ ಇನ್ಫೋಸಿಸ್ ನೆರವು

ಇಲಾಖೆ ಜತೆಗಿನ 250 ಕೋಟಿ ರುಪಾಯಿಗಳ ಈ ಒಪ್ಪಂದವನ್ನು ಐದು ವರ್ಷಗಳ ಅವಧಿಗೆ ಇನ್ಫೋಸಿಸ್ ಕಂಪನಿ 2009ರಲ್ಲಿ ಪಡೆದುಕೊಂಡಿದೆ. ನಾಲ್ಕು ಹಂತಗಳ 'ಸಿಪಿಸಿ' ಕಟ್ಟಡದಲ್ಲಿ ಇನ್ಫೋಸಿಸ್ ಹೊರಗುತ್ತಿಗೆಯ 200 ಮತ್ತು ಇಲಾಖೆಯ 35 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 2009ರಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಇನ್ಫೋಸಿಸ್ ಪ್ರಧಾನ ಕಚೇರಿಯಲ್ಲಿ ಈ ವಿಭಾಗ ಕಾರ್ಯನಿರ್ವಹಿಸಿತ್ತು.
ಇದೊಂದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆಗೆ ಅತ್ಯುತ್ತಮ ನಿದರ್ಶನವಾಗಿದೆ. ಬೆಂಗಳೂರಿನಲ್ಲಿ ಇರುವ ಆದಾಯ ತೆರಿಗೆ ಇಲಾಖೆಯ ಅರ್ಜಿ ವಿಲೇವಾರಿ ಕೇಂದ್ರವು (ಸಿಪಿಸಿ) ಕೆಲ ರಿಟರ್ನ್ಸ್ಗಳನ್ನು ಪರಿಶೀಲಿಸಿ ಮರು ಪಾವತಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ. ಆನ್ಲೈನ್ನಲ್ಲಿ ಸಲ್ಲಿಸುವ ರಿಟರ್ನ್ಸ್ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಇನ್ಫೋಸಿಸ್ನ ತಂತ್ರಜ್ಞಾನವು ನೆರವಿಗೆ ಬಂದಿದೆ.
ಇನ್ಫೋಸಿಸ್ ಹೊರಗುತ್ತಿಗೆಯ ನೆರವಿನಿಂದ ಆದಾಯ ತೆರಿಗೆ ಇಲಾಖೆಯು ರಿಟರ್ನ್ಸ್ಗಳನ್ನು ಕೆಲವೇ ವಾರಗಳಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿದೆ. ವರ್ಷಗಳ ಹಿಂದೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಗರಿಷ್ಠ ಒಂದೂವರೆ ವರ್ಷದಷ್ಟು ಸಮಯ ಬೇಕಾಗುತ್ತಿತ್ತು.
'ಇ-ಫೈಲಿಂಗ್' ಸೌಲಭ್ಯದಡಿ ಸಲ್ಲಿಸಲಾಗುವ ರಿಟರ್ನ್ಸ್ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಇಲಾಖೆಯ ಕೇಂದ್ರೀಕೃತ ವಿಲೇವಾರಿ ಕೇಂದ್ರದಲ್ಲಿ ಅಗತ್ಯವಾದ ತಂತ್ರಜ್ಞಾನ ಸೇರಿದಂತೆ ಮೂಲ ಸೌಕರ್ಯಗಳನ್ನೆಲ್ಲ ಅಳವಡಿಸಲಾಗಿದೆ. ದಿನವೊಂದಕ್ಕೆ ಒಂದು ಲಕ್ಷದಷ್ಟು ರಿಟರ್ನ್ಸ್ಗಳನ್ನು ಇಲ್ಲಿ ನಿರ್ವಹಿಸಲಾಗುತ್ತಿದೆ. 2011-12ನೇ ಸಾಲಿನಲ್ಲಿ ಅಂದಾಜು 1.5 ಕೋಟಿಗಳಷ್ಟು ಅರ್ಜಿಗಳನ್ನು ನಿರ್ವಹಿಸಲಾಗುವುದು. ಆನ್ಲೈನ್ನಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣವು 2009-10 ವರ್ಷಕ್ಕೆ ಹೋಲಿಸಿದರೆ ಶೇ 80ರಷ್ಟು ಹೆಚ್ಚಳಗೊಂಡಿದೆ ಎಂದು ಆದಾಯ ತೆರಿಗೆ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಉಚಿತ ಕರೆ ಸೌಲಭ್ಯ: ಹೊರಗುತ್ತಿಗೆ ಕಾಲ್ಸೆಂಟರ್ ನಲ್ಲಿ 60 ದೂರವಾಣಿ ಸಂಖ್ಯೆಗಳು ಉಚಿತ ಕರೆ ಸೌಲಭ್ಯದಡಿ ಕಾರ್ಯನಿರ್ವಹಿಸುತ್ತಿವೆ. ಕರೆಗಳ ದಟ್ಟಣೆ ಅವಧಿಯಲ್ಲಿ ಕೊಂಚ ಅಡಚಣೆ ಉಂಟಾದರೂ, ಪ್ರತಿ ದಿನ 3000 ಜನರ ಅಹವಾಲು ಆಲಿಸಲಾಗುತ್ತಿದೆ ಎಂದು ಆಡಿಷನಲ್ ಕಮಿಷನರ್ ಆರ್. ಕೆ. ಮಿಶ್ರಾ ಹೇಳುತ್ತಾರೆ. ವಾರಾಂತ್ಯದ ರಜೆ ದಿನಗಳಲ್ಲಿ ಕೂಡ ಜನರು ಧ್ವನಿ ಆಧಾರಿತ ಸೇವೆ ಮೂಲಕ ತಮ್ಮ ದೂರುಗಳನ್ನು ದಾಖಲಿಸಬಹುದು. 'ಸಹಜ್' ಮತ್ತು 'ಸುಗಮ್' ಅರ್ಜಿ ನಮೂನೆಗಳಲ್ಲಿ 'ಇ-ಫೈಲಿಂಗ್' ಸಲ್ಲಿಕೆ ಹೆಚ್ಚು ಸರಳೀಕರಣಗೊಂಡಿದೆ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications