ಮೈಸೂರು ವಿವಿ: ನ್ಯಾಯ ಕೇಳಿದ ಸರಿತಾಗೆ ನೋಟಿಸ್

ವಿಶ್ವವಿದ್ಯಾಲಯದ ತನಿಖಾ ಸಮಿತಿ ಮುಂದೆ ಹಾಜಾರಾಗುವುದಿಲ್ಲ ಎಂದು ಹೇಳಿರುವ ಸರಿತಾ, ಮಾಧ್ಯಮಗಳ ಮುಂದೆ ವಿವಿಯ ಮಾನ ಹರಾಜಾಗುತ್ತಿದ್ದಾರೆ. ಈಕೆಗೆ ನೀಡಿರುವ ಫೆಲೋಶಿಪ್ ಏಕೆ ಹಿಂದಕ್ಕೆ ಪಡೆಯಬಾರದು ಎಂದು ನೋಟಿಸ್ ನಲ್ಲಿ ಕೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊ ಶಿವಬಸವಯ್ಯ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಎಸ್ ಎನ್ ನಾಯಕ್ ಹೇಳಿದ್ದಾರೆ.
ಈ ನಡುವೆ ವಿವಿಯ ನೋಟಿಎಸ್ ನಿಂದ ಮನನೊಂದಿರುವ ಸರಿತಾ ತನ್ನ ಪತಿ ವಿಜಯ್ ಕುಮಾರ್ ಅವರನ್ನು ಕರೆದುಕೊಂಡು ರಾಜಭವನದ ಮುಂದೆ ನಿಂತಿದ್ದಾರೆ. ಲೈಂಗಿಕ ಕಿರುಕುಳ ಆಗಿದೆ ಎಂದು ಹೆಣ್ಣೊಬ್ಬಳು ಸಾರ್ವಜನಿಕವಾಗಿ ಹೇಳಿದರೂ ವಿವಿಗೆ ತನ್ನ ಪ್ರತಿಷ್ಠೆಯೇ ಹೆಚ್ಚಾಗಿದೆ.
ಅನಗತ್ಯ ವಿವಾದ ತೆಗೆದು ಆರೋಪಿ ಪ್ರೊ ಶಿವಬಸವಯ್ಯ ಅವರನ್ನು ಉಳಿಸುವ ಪ್ರಯತ್ನ ನಡೆದಿದೆ. ರಾಜ್ಯಪಾಲರಲ್ಲಿ ನ್ಯಾಯ ಕೇಳುವುದೊಂದೆ ನಮಗೆ ಉಳಿದಿರುವ ದಾರಿ ಎಂದು ಸರಿತಾ ಹೇಳಿದ್ದಾರೆ.












Click it and Unblock the Notifications