Get Updates
Get notified of breaking news, exclusive insights, and must-see stories!

ಕಟ್ಟಾ ಕೊರಳ ಕುಣಿಕೆ ಬಿಗಿಗೊಳಿಸಿದ ಲೋಕಾಯುಕ್ತ

Katta Subramanya Naidu
ಬೆಂಗಳೂರು ಜು 19: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ 9 ಜನರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸಿದೆ.ನ್ಯಾಯಲಯಕ್ಕೆ ಗೈರು ಹಾಜರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಜೂ 23ರಂದು ಖುದ್ದು ಹಾಜರಾಗುವಂತೆ ನ್ಯಾಯಮೂರ್ತಿ ಸುಧೀಂದ್ರ ರಾವ್ ಆದೇಶಿಸಿದ್ದಾರೆ.

ಸಮನ್ಸ್ ಜಾರಿಯಾದ ಮೇಲೆ ಕೋರ್ಟ್ ಗೆ ಬರಲು ಕಾಲಾವಕಾಶ ಕೋರಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು, ವಿಚಾರಣೆಗೆ ಗೈರು ಹಾಜರಾಗಿದ್ದರು. ಕಟ್ಟಾ ಅವರ ಪುತ್ರ ಪಾಲಿಕೆ ಸದಸ್ಯ ಜಗದೀಶ್, ಗ್ರಾಮ ಪಂಚಾಯ್ತಿ ಸದಸ್ಯ ಮಂಜು, ಟಿಪಿ ಮುನಿನಾರಾಯಣಪ್ಪ,ಗೋಪಿ, ಬಸವಪೂರ್ಣಯ್ಯ, ಶ್ರೀನಿವಾಸ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ನೀಡುವಂತೆ ಕೋರಿದರು.

ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು, ಅವರ ಮನೆಗೆ ಸಮನ್ಸ್ ಪ್ರತಿ ಅಂಟಿಸಲಾಗಿತ್ತು. ಕಟ್ಟಾ ಅವರಂತೆ ಜಗಯ್ಯ ಹಾಗೂ ವೆಂಕಯ್ಯ ಎಂಬುವರು ಕೂಡಾ ಗೈರು ಹಾಜರಾಗಿದ್ದು, ಅವರಿಗೂ ಜು.23ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ಏನಿದು ಹಗರಣ?: ಕಟ್ಟಾ ಸುಬ್ರಮಣ್ಯ ನಾಯ್ಡು ಒಡೆತನದ ಇಟಾಸ್ಕ ಕಂಪನಿಗೆ 87 ಕೋಟಿ ರು ಮೌಲ್ಯದ 325 ಎಕರೆ ಮಂಜೂರು ಮಾಡಿಸಿಕೊಳ್ಳಲಾಗಿದೆ. ಕೆಐಎಡಿಬಿ ನೀಡಿದ ಪರಿಹಾರ ಧನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಹೊರೆಸಲಾಗಿದೆ. 9 ಜನರ ವಿರುದ್ಧ 18 ಸಾವಿರ ಪುಟಗಳ ಆರೋಪ ಪಟ್ಟಿ ತಯಾರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+