ಮಾರಿಷಸ್ ಹಾದಿಯಲ್ಲಿ ಮತ್ತೊಂದು ಆಣೆ ಪ್ರಮಾಣ ಪ್ರಹಸನ

ಲೆಹರ್ ಸಿಂಗ್ ಎಂಬ ದೂತನನ್ನು ಕುಮಾರ ಸಂಧಾನಕ್ಕೆ ಕಳಿಸಿದ್ದರು ಎಂಬುದು ಬಾಂಬಿನ ಕಚ್ಚಾ ಸಾಮಗ್ರಿಯಾಗಿತ್ತು. ಯಡಿಯೂರಪ್ಪ ಪದತಲದಲ್ಲಿ ಸರಿಯಾಗಿಯೇ ಸ್ಫೋಟಿಸಿದ ಬಾಂಬ್ ಅವರ ಶಾಂತಿ, ನೆಮ್ಮದಿ ಸಕಲವನ್ನೂ ನಾಶಗೊಳಿಸಿತ್ತು. ಹಾಗೆಂದು ಇದೇನೂ ಅವರಿಗೆ ಅನಿರೀಕ್ಷಿತ ಆಘಾತವಲ್ಲ. ಆದರೂ ಸ್ಫೋಟದಿಂದ ಚೇತರಿಸಿಕೊಂಡವರೇ ವರ್ತಮಾನ ಪತ್ರಿಕೆಗಳ ಮೂಲಕ ಆಣೆ ಪ್ರಮಾಣದ ಪ್ರಹಸನಕ್ಕೆ ನಾಂದಿ ಹಾಡಿದರು. ಮುಂದಿನದೆಲ್ಲ ಈಗಾಗಲೇ ಇತಿಹಾಸ ಪುಟಗಳಲ್ಲಿ ಸೇರಿದೆ.
ಇದೀಗ ಬಂದ ಸುದ್ದಿಯಂತೆ 'ಲೋಕಾಯುಕ್ತ ಭೇಟಿ ನಿಜ, ಆದರೆ..ಅದು ಬೇರೆ ವಿಷ್ಯ' ಎಂದು ಸನ್ಮಾನ್ಯ ಧನಂಜಯ್ ಕುಮಾರ್ ನೀಡಿರುವ ಸಂಧಾನ ಸ್ಪಷ್ಟೀಕರಣಕ್ಕೆ 'ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ತಿರುಗೇಟು ನೀಡಿದ್ದಾರೆ. ಇದು ಮತ್ತೊಂದು ಆಣೆ ಪ್ರಮಾಣ ಪ್ರಹಸನಕ್ಕೆ ನಾಂದಿಯಾಗುತ್ತದಾ!? ಕಾದುನೋಡುವ?
ಈಗೇನಪಾ ಅಂದರೆ .... ಈಗಲೂ ಅಷ್ಟೆ ಯಡಿಯೂರಪ್ಪ ಅವರ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಯಡಿಯೂರಪ್ಪ ಮಾರಿಷಸ್ ಗೆ ತೆರಳುವ ಮುನ್ನಾ ಕಾಲದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು 'ಬರೀ ಒಬ್ಬ ದೂತ ಏನು ಬಂತು, ಇಡೀ ಪಟಾಲಮ್ಮೇ ಸಂಧಾನಕ್ಕೆ ಬಂದಿತ್ತು' ಎಂದು ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮುಂದಿದೆ ಮಾರಿ ಹಬ್ಬ. ಗಣಿಗಾರಿಕೆಯಲ್ಲಿ ನೀವೂ (ಯಡಿಯೂರಪ್ಪ) ಭಾಗಿಯೇ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಅಕ್ರಮ ಗಣಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಬಗ್ಗೆ ಸುಳಿವು ಪಡೆದಿದ್ದೇ ತಡ ಸನ್ಮಾನ್ಯ ಯಡಿಯೂರಪ್ಪನವರು ಸಕುಟುಂಬ ಪರಿವಾರ ಸಮೇತ ಮಾರಿಷಸ್ಸಿಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಕುತೂಹಲಕ್ಕಾಗಿ... ಲೋಕಾಯುಕ್ತ ಬಾಂಬ್ ಈ ಬಾರಿ ಏಕೆ ಸ್ಫೋಟಗೊಳ್ಳಲಿಲ್ಲ ಎಂಬುದರ ಬಗ್ಗೆ ಗಣಿಗಾರಿಕೆ ಮಾಡಿದಾಗ ಅದು ಎಲ್ಲರ ಬುಡಕ್ಕೂ ನೀರು ತರುವ ಖಾತ್ರಿಯಿರುವುದರಿಂದ ಎಲ್ಲ ಗಪ್ ಚುಪ್ ಅಂತೆ.
ಯಾರೇ ಕೂಗಾಡಲಿ ಊರೇ ಹೋರಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ... ಎಂದು ಸಕಲ ಜನನಾಯಕರೂ ಕೋರಸ್ ನಲ್ಲಿ ಗುನುಗುತ್ತಿರುವುದು ಕೇಳಿಬರುತ್ತಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications