ಮುಂಬೈ ಸ್ಫೋಟ : ದಿನೇದಿನೇ ದುರ್ಬಲವಾಗುತ್ತಿರುವ ಭಾರತ?

ಮುಂಬೈ ಮೇಲೆ ಇದು ಆಗುತ್ತಿರುವುದು ಇದು ನಾಲ್ಕನೇ ಪ್ರಮುಖ ದಾಳಿ. ಮೊದಲ ಬಾರಿ ಆಗಿದ್ದು 1993, ಮಾರ್ಚ್ 12ರಂದು. ದಾವೂದ್ ಇಬ್ರಾಹಿಂ ಸರಣಿ ಹತ್ಯೆ ನಡೆಸಿದ್ದ. ಎರಡನೇ ಬಾರಿ ನಡೆದದ್ದು 2006ರ ಜುಲೈ 11ರಂದು. ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ 7 ಜನ ಹತ್ಯೆಗೀಡಾಗಿದ್ದರು. ಮೂರನೇ ಬಾರಿ ಆದದ್ದು ನವೆಂಬರ್ 26, 2008ರಲ್ಲಿ ಇದರಲ್ಲಿ 166 ಜನ ಹತರಾಗಿದ್ದರು.
ಈಗ ನಾಲ್ಕನೇ ಬಾರಿ ದಾಳಿ ನಡೆದಿದೆ. ಜುಲೈ 13ರಂದು ನಡೆದ ಮೂರು ಸರಣಿ ಸ್ಫೋಟಗಳು 19 ಜನ ಬಲಿ ತೆಗೆದುಕೊಂಡಿವೆ. 131 ಜನ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಯಾರ ಕೈವಾಡ ಇದೆಯೆಂದು ಇನ್ನೂ ತಿಳಿದುಬಂದಿಲ್ಲ. ಇಂಡಿಯನ್ ಮುಜಾಹಿದ್ದಿನ್ ಕೈವಾಡವಿರಬಹುದೆಂದು ಶಂಕಿಸಲಾಗಿದೆಯಾದರೂ ದೃಢಪಟ್ಟಿಲ್ಲ.
ಯಾಕೆ ಹೀಗೆ? ಮುಂಬೈ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಉಗ್ರರು ದಾಳಿ ಮಾಡುತ್ತಲೇ ಇದ್ದಾರೆ. ದಾಳಿಯಾದಾಗ ಕಟ್ಟೆಚ್ಚರ ವಹಿಸುವುದು, ಬಿಸಿ ಆರುತ್ತಿದ್ದಂತೆ ಮತ್ತೆ ಎಂದಿನ ನಿರ್ಲಕ್ಷ್ಯ ಸ್ಥಿತಿಗೆ ಜಾರುತ್ತಿದ್ದೇವೆ. ಇದೇ ಸಮಯ ನೋಡಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಪಿ. ಚಿದಂಬರಂ ತಮ್ಮ ಕೈಲಾದದ್ದನ್ನು ಮಾಡಿತ್ತಿದ್ದಾರಾದರೂ, ಅವರು ಬಿಟ್ಟರೆ ಇನ್ನಾರು? ಎಂಬಂತಹ ಸ್ಥಿತಿ ನಮ್ಮಲ್ಲಿದೆ.
ಇದಕ್ಕೆ ಕಾರಣರು ಯಾರು? ಬಲಿಷ್ಠ ಭಾರತ ಭಯೋತ್ಪಾದನೆ ಹತ್ತಿಕ್ಕುವಲ್ಲಿ ದಿನೇ ದಿನೇ ನಿಶ್ಶಕ್ತವಾಗುತ್ತಿದೆಯೆ? ಅಥವಾ ನಮ್ಮ ರಾಜಕಾರಣಿಗಳೇ ದೇಶವನ್ನು ಈ ಸ್ಥಿತಿಗೆ ತಂದಿದ್ದಾರಾ? ಉಗ್ರರನ್ನು ಮಟ್ಟ ಹಾಕುವುದಿರಲಿ, ಸಿಕ್ಕವರನ್ನು ಗಲ್ಲಿಗೇರಿಸಲೂ ನಮ್ಮಿಂದ ಆಗುತ್ತಿಲ್ಲ. ಮತ್ತೆ ಯಾವ್ಯಾವ ಸಂದರ್ಭದಲ್ಲಿ ದಾಳಿಗಳು ನಮ್ಮ ಮೇಲೆ ಆಗಿವೆ ಎಂಬ ವಿವರಗಳನ್ನು ಈ ಲೇಖನದಲ್ಲಿ ಓದಿರಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications