ತ್ರಿವಳಿ ಸ್ಫೋಟ: ಈ ಅವಳಿಯ ಹಾವಳಿ ಇರಬಹುದೇ?

ಮತ್ತೊಂದು ದೂರದ ಸಾಧ್ಯತೆ ಎಂದರೆ ಪಾಕ್ ನಲ್ಲಿ ನೆಲೆಸಿರುವ, ಅಲ್ ಖೈದಾದತ್ತ ಸಹಾನುಭೂತಿ ಹೊಂದಿರುವ ಲಷ್ಕರೆ ತಯ್ಬಾ ಪ್ರತ್ಯೇಕತಾವಾದಿ ಸಂಘಟನೆಯತ್ತಲೂ ಸಂಶಯ ಸುಳಿದಾಡುತ್ತದೆ. 2008 ಮುಂಬೈ ಸ್ಫೋಟಕ್ಕೆ ಇದೇ LeT ಕಾರಣವೆಂಬುದು ಜಗಜ್ಜಾಹೀರು ಆದ ಸಂಗತಿ.
ಜಾಗತಿಕ ಬೇಹುಗಾರಿಕೆ ಸಂಸ್ಥೆಯಾದ ಸ್ಟ್ರಾಟಫಾರ್ ಪ್ರಕಾರ ಇಂಡಿಯನ್ ಮುಜಾಹಿದ್ದೀನ್ ಅಲ್ಪ ಮತ್ತು ಸಾಧಾರಣ ಪ್ರಮಾಣದ ಸ್ಫೋಟಕ ಕೃತ್ಯಗಳನ್ನು ಕೈಗೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ ಅಷ್ಟೆ. ಇದರ ಸದಸ್ಯರು ಸ್ಥಳೀಯ ಮುಸ್ಲಿಮರು. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದ ಭಯೋತ್ಪಾದಕ ಸಂಘಟನೆಗಳಿಂದ ಇವರಿಗೆ ತರಬೇತಿ ಮತ್ತು ಬೆಂಬಲ ಸಿಗುತ್ತಿದೆ. ಬಾಂಗ್ಲಾದ ಹರ್ಕತ್ ಉಲ್ ಮುಜಾಹಿದ್ದೀನ್ ಅಲ್ ಇಸ್ಲಾಮಿ ಸಂಘಟನೆಯ ಸದಸ್ಯರೂ ಇದರಲ್ಲಿ ಸಕ್ರಿಯರಾಗಿದ್ದಾರೆ.
2007ರಲ್ಲಿ ಬಾಂಬ್ ಸ್ಫೋಟಗಳ ಹಾವಳಿ ದಾಂಗುಡಿಯಿಟ್ಟಾಗ ಮೊದಲ ಬಾರಿಗೆ ಈ ಸಂಘಟನೆಯ ಹೆಸರು ಕೇಳಿಬಂತು. ಆನಂತರ ಜೈಪುರ, ಬೆಂಗಳೂರು, ಅಹಮದಾಬಾದ್ ಮತ್ತು ನವದೆಹಲಿಯಲ್ಲಿ ಸಂಭವಿಸಿದ ಸ್ಫೋಟಗಳಿಗೆ ಈ ಸಂಘಟನೆಯೇ ಹೊಣೆಹೊತ್ತಿತ್ತು. ತಾಜಾ ಆಗಿ ಇದು 2010 ರಲ್ಲಿ ಪುಣೆಯಲ್ಲಿ ಭಯೋತ್ಪಾದಕ ಕೃತ್ಯವೆಸಗಿತ್ತು.
ಇನ್ನು, ಲಷ್ಕರೆ ತಯ್ಬಾ ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಭಯೋತ್ಪಾದಕ ಸಂಘಟನೆಯಾಗಿದೆ. ಕಾಶ್ಮೀರದಲ್ಲಿ ಭಾರತದ ವಿರುದ್ಧ ಜಗಳಕ್ಕಿಳಿಯಲು ಪಾಕ್ ಸೇನೆಯೇ ಈ ಸಂಘಟನೆಗೆ ಕುಮ್ಮಕ್ಕು ನೀಡುತ್ತದೆ. 2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದು ಇದೇ ಪಾಕ್ ಪ್ರೇರಿತ ಉಗ್ರರು ಎಂಬುದು ಭಾರತಕ್ಕೆ ಮನವರಿಕೆಯಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಸ್ಫೋಟದ ನಂತರ ಇದು ತಣ್ಣಗಾಗಿದೆ. ಆದರೂ ವಿಭಿನ್ನ ಹೆಸರುಗಳಲ್ಲಿ ಇದು ಸಕ್ರಿಯವಾಗಿದೆ ಎಂದು ಅಮೆರಿಕವೇ ಹೇಳಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications