Get Updates
Get notified of breaking news, exclusive insights, and must-see stories!

ವಿಧಾನಸೌಧದಿಂದ ಬಸವಣ್ಣನ ಪಾದಕ್ಕೆ ಬಿದ್ದ ಕುಮಾರಸ್ವಾಮಿ

HD Kumaraswamy hunger strike location shift
ಬೆಂಗಳೂರು ಜು 6: ಶನಿವಾರ(ಜು 9) ದಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಮರಣಾಂತ ಉಪವಾಸ ಕೂರುವುದು ನಿಶ್ಚಯವಾಗಿದೆ. ಆದರೆ, ಲೋಕೇಷನ್ ಮಾತ್ರ ವಿಧಾನಸೌಧದಿಂದ ಬಸವೇಶ್ವರ ಪ್ರತಿಮೆ ಕಡೆಗೆ ಶಿಫ್ಟ್ ಆಗಿದೆ.

ಯಡಿಯೂರಪ್ಪ ಹೊರ ತಂದಿರುವ 1500 ಕೋಟಿ ರು ಚಾರ್ಚ್ ಶೀಟ್ ಗೆ ಸಂಬಂಧಪಟ್ಟಂತೆ ಸಿಬಿಐ ಇಲ್ಲವೇ ಯಾವುದೇ ತನಿಖೆ ಆದೇಶ ಮಾಡಬೇಕು. ಮೂರು ತಿಂಗಳಲ್ಲಿ ಸತ್ಯ ಹೊರಬೀಳಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ. ಇದೇ ತಮ್ಮ ಉಪವಾಸದ ಮೂಲ ಉದ್ದೇಶ ಎಂದು ಪುನರುಚ್ಚರಿಸಿದ್ದಾರೆ.

ವಿಧಾನಸೌಧದ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ ಎಂಬುದು ಗೊತ್ತಿದೆ. ಅದು ಗೊತ್ತಿಲ್ಲದೆ ನಾನು ಸಿಎಂ ಆಗಿರಲಿಲ್ಲ. ಬಸವೇಶ್ವರ ಪ್ರತಿಮೆ ಮುಂದೆ ಧರಣಿ ಮಾಡಲು ಅವಕಾಶ ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಶಾಸಕರು ಹಾಗೂ ಮುಖಂಡರು ಪ್ರತಿಮೆ ಮುಂದೆ ಧರಣಿ ನಡೆಸಿದ ಉದಾಹರಣೆಗಳಿವೆ. ನಮಗೂ ಅವಕಾಶ ನೀಡಬೇಕು. ಯಡಿಯೂರಪ್ಪ ಅವರ ಆರೋಪದಿಂದ ಗೌಡರ ಕುಟುಂಬಕ್ಕೆ ಅಂಟಿರುವ ಕಳಂಕ ದೂರಾಗಬೇಕು ಅದಕ್ಕಾಗಿ ಈ ಉಪವಾಸ ಎಂದು ಕುಮಾರಸ್ವಾಮಿ ಬುಸುಗುಟ್ಟಿದರು.

ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿಯ ಎಡಬಲದಲ್ಲಿ ಮಾಜಿ ಸಿಎಂ ಬಂಗಾರಪ್ಪ, ಪಿಜಿಆರ್ ಸಿಂಧ್ಯಾ, ಡ್ಯಾನಿಷ್ ಅಲಿ, ಬೆಂಕಿ ಮಹದೇವು ಮುಂತಾದವರು ಕಾಣಿಸಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+