ಪುಟ್ಟಪರ್ತಿ ಆಗಿದೆ 'ಅನಂತ' ಸಾಯಿ ಗೋಲ್ಡ್ ಪ್ಯಾಲೇಸ್

ಸಾಯಿಬಾಬಾ ಅವರ ಏಕಾಂತ ಕೊಠಡಿ ಯಜುರ್ ಮಂದಿರದ ಪಕ್ಕದಲ್ಲಿರುವ ಕೋಣೆಯಲ್ಲಿ ಶನಿವಾರ (ಜುಲೈ 2) ಸರ್ಕಾರಿ ಅಧಿಕಾರಿಗಳು ಹಾಗೂ ಸತ್ಯ ಸಾಯಿ ಕೇಂದ್ರೀಯ ಟ್ರಸ್ಟ್ನ ಸದಸ್ಯರು ನಡೆಸಿದ ಜಂಟಿ ತಪಾಸಣೆ ವೇಳೆ 76 ಲಕ್ಷ ರೂ. ಮೌಲ್ಯದ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. 57.96 ಲಕ್ಷ ರೂ. ಮೌಲ್ಯದ 116 ಕೆ.ಜಿ. ಬೆಳ್ಳಿ, 15.83 ಲಕ್ಷ ರೂ. ಬೆಲೆ ಬಾಳುವ 905 ಗ್ರಾಂ ಚಿನ್ನ ಹಾಗೂ 3 ಲಕ್ಷ ರೂ.ನ ಒಂದು ವಜ್ರದ ಉಂಗುರ ದೊರೆತಿದೆ. ಈ ವಸ್ತುಗಳನ್ನು ಸಾಯಿ ಟ್ರಸ್ಟ್ನ ಖಾತೆಯಲ್ಲಿಡಲಾಗಿದೆ.
ಯಜುರ್ ಮಂದಿರದ ಪಕ್ಕದ ಕೊಠಡಿಯಲ್ಲಿನ ಅಪೂರ್ವ ವಸ್ತುಗಳ ಬಗ್ಗೆ ಪಟ್ಟಿ ಮಾಡುವಂತೆ ಟ್ರಸ್ಟ್ನವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ತಂಡವು ತಪಾಸಣೆ ನಡೆಸಿತು. ಅನಂತಪುರ ಜಂಟಿ ಜಿಲ್ಲಾಧಿಕಾರಿ ಅನಿತಾ ರಾಮಚಂದ್ರನ್ ಮತ್ತು ಹೆಚ್ಚುವರಿ ಜಂಟಿ ಜಿಲ್ಲಾಧಿಕಾರಿ ಇದರ ನೇತೃತ್ವ ವಹಿಸಿದ್ದರು.
ಈ ನಡುವೆ, ಯಜುರ್ ಮಂದಿರದಲ್ಲೂ ಜಂಟಿ ಶೋಧ ನಡೆಸಲಾಯಿತಾದರೂ ಯಾವುದೇ ಆಭರಣಗಳು ಪತ್ತೆಯಾಗಿಲ್ಲ. ಆದರೆ ಕೆಲವೊಂದು ಲಕೋಟೆಗಳು ಹಾಗೂ ಕಾಗದಪತ್ರಗಳು ಕಂಡುಬಂದಿವೆ. ಲಕೋಟೆಯಲ್ಲಿ ಭಕ್ತರು ನೀಡಿರುವ ಚೆಕ್ ಇರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಯಜುರ್ ಮಂದಿರದಲ್ಲಿ ಮತ್ತೆ ತಪಾಸಣೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತಪುರದ ಜಂಟಿ ಜಿಲ್ಲಾಧಿಕಾರಿ ಅನಿತಾ ರಾಮಂದ್ರನ್ ಹಾಗೂ ಹೆಚ್ಚುವರಿ ಜಂಟಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಪಾಸಣೆ ಕಾರ್ಯ ನಡೆಯಿತು. 15 ದಿನಗಳ ಹಿಂದಷ್ಟೇ ಸಾಯಿ ಬಾಬಾ ಅವರ ಕೋಣೆ ಯಜುರ್ ಮಂದಿರದಲ್ಲಿ 11.56 ಕೋಟಿ ರೂ. ನಗದು, 98 ಕೆ.ಜಿ. ಚಿನ್ನ ಹಾಗೂ 307 ಕೆ.ಜಿ. ಬೆಳ್ಳಿ ಪತ್ತೆಯಾಗಿತ್ತು.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications