ಬೆಂಗಳೂರು ಮೇಯರ್ ಶಾರದಮ್ಮ ಹೊರಟರು ಕೊರಿಯಾಕ್ಕೆ

ಕೊರಿಯಾದ ಗ್ವಾಂಗ್ಜು ಸಿಟಿಯ ಮೂವರು ಅಧಿಕಾರಿಗಳು ಬುಧವಾರ ಮೇಯರ್ ಶಾರದಮ್ಮ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದಾಗ ಕೊರಿಯಾದ ಕಾನ್ಸುಲೇಟ್ ಜನರಲ್ ಹಾಗೂ ಗ್ವಾಂಗ್ಜು ಸಿಟಿ ಮೇಯರ್ ಕಾಂಗ್ ವೂನ್-ಟೇ ಪರವಾಗಿ ತಮ್ಮ ದೇಶಕ್ಕೆ ಬರುವಂತೆ ಕೋರಿದ ಆಮಂತ್ರಣ ಪತ್ರವನ್ನು ಮೇಯರ್ ಶಾರದಮ್ಮ ಅವರಿಗೆ ನೀಡಿ ಮುಕ್ತ ಆಹ್ವಾನ ಕೋರಿದರು.
ಅಕ್ಟೋಬರ್ 11 ರಿಂದ 13 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿ ಮಾಡಲು ನಿರೀಕ್ಷಿಸಿರುವುದಾಗಿ ಗ್ವಾಂಗ್ಜು ಸಿಟಿ ಮೇಯರ್ ಕಾಂಗ್ ವೂನ್-ಟೇ ಅವರು ಶಾರದಮ್ಮ ಅವರಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆಹ್ವಾನ ಪತ್ರ ಸ್ವೀಕರಿಸಿದ್ದೇ ತಡ. ಇ-ಮೇಲ್ ಸಂದೇಶ ರವಾನಿಸಿ, ದಮ್ಮಯ್ಯ ಕಾರ್ಯಕ್ರಮಕ್ಕೆ ಬರ್ತೀನಿ ಎಂದಿದ್ದಾರೆ.
ಒಂದು ವೇಳೆ ಮೇಯರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ ಅದು ಅವರ ಪ್ರಥಮ ವಿದೇಶ ಪ್ರವಾಸವಾಗಲಿದೆ. ಅಲ್ಲದೆ, ಅದು ಅವರ ಪ್ರಥಮ ವಿಮಾನಯಾನ ಕೂಡ ಹೌದು. ಕಾರ್ಯಕ್ರಮವು ಪರಿಸರ ಕಾಳಜಿ ಕುರಿತಾದ ವಿಶ್ವಸಂಸ್ಥೆಯ ಶಿಖರ ಸಮ್ಮೇಳನವಾಗಿದೆ.












Click it and Unblock the Notifications