ತಪ್ಪದೇ ಬನ್ನಿ, ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ

* ವಿಶ್ವನಾಥ್ ಹುಲಿಕಲ್, ಉತ್ತರ ಕ್ಯಾಲಿಫೋರ್ನಿಯ
* ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ
* ಪ್ರಸ್ತುತಿ: ಭಾರತೀಯ ವಿದ್ಯಾ ಭವನ ಮತ್ತು ಇನ್ ಫೋಸಿಸ್ ಪ್ರತಿಷ್ಠಾನ
* ನಿರ್ದೇಶನ: ಅನುಪಮ ಹೊಸಕೆರೆ
* ದಿನಾಂಕ: ಜೂನ್ 9, 2011
* ದಿನ: ಗುರುವಾರ
* ಸಮಯ: ಸಂಜೆ 6.00 ರಿಂದ 7.30 ರವರೆಗೆ
* ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ
ಬೆಂಗಳೂರು - 560004
ಸಂಪರ್ಕ: ಧಾತು 6568 3396 ಅಥವ [email protected] ಸರ್ವರಿಗೂ ಸುಸ್ವಾಗತ
ಕಥೆ: ಮಹರ್ಷಿ ವೇದವ್ಯಾಸರು ರಚಿಸಿದ ಭಾಗವತದಿಂದ ಈ ಕಥೆಯನ್ನು ಆರಿಸಲಾಗಿದೆ. ಸ್ವಾರ್ಥಿ, ದುರಹಂಕಾರಿ ಮತ್ತು ಶಕ್ತಿಶಾಲಿ ರಾಕ್ಷಸರ ವಂಶದಲ್ಲಿ ಪ್ರಹ್ಲಾದ ಎಂಬ ಮಗುವಿನ ಜನನವಾಗುತ್ತದೆ. ಬಾಲ್ಯದಿಂದಲೇ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದ, ದುಷ್ಟಶಕ್ತಿಗಳ ನಿರ್ಮೂಲನಕ್ಕೆ ಕಾರಣಕರ್ತನಾಗುತ್ತಾನೆ. ಕಂಬದೊಳಗಿಂದ ನರಸಿಂಹ ಪ್ರತ್ಯಕ್ಷವಾಗಿ ಅಸುರನ ವಧೆ ಮಾಡುವ ಮೂಲಕ, ಕಥೆ ರೋಮಾಂಚಕ ಮುಕ್ತಾಯವನ್ನು ಮುಟ್ಟುತ್ತದೆ. ಪ್ರಹ್ಲಾದನ ಈ ರೋಚಕ ಕಥೆ ಅನೇಕ ರೀತಿಯ ಬೊಂಬೆಯಾಟಗಳಿಗೆ ವಸ್ತುವಾಗಿದೆ.
ಧಾತು ಬೊಂಬೆಯಾಟ ಸಂಸ್ಥೆ ಬೆಂಗಳೂರಿನ ಪ್ರಮುಖ ಬೊಂಬೆಯಾಟ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಹಂಪಿ ಉತ್ಸವ, ಸುವರ್ಣ ಕರ್ನಾಟಕ ಮಹೋತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ, ಸಂಸ್ಕೃತ ಪುಸ್ತಕ ಮೇಳ ಮತ್ತು "ರಂಗ ಶಂಕರ"ದ ರಂಗ ಉಗಾದಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿದೆ.
ಧಾತುವಿನ ನಿರ್ದೇಶಕಿ ಶ್ರೀಮತಿ ಅನುಪಮ ಹೊಸಕೆರೆಯವರು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಶಿಪ್ಗೆ ಭಾಜನರಾಗಿದ್ದಾರೆ. ಶ್ರೀಮತಿಯವರು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಮೌಲಿಕವಾದ ಕಥೆಗಳನ್ನು ಆರಿಸಿಕೊಂಡು, ಕರ್ನಾಟಕದ ಸುಂದರ ಮತ್ತು ಶಾಸ್ತ್ರೀಯ ಬೊಂಬೆಯಾಟಗಳ ಮೂಲಕ ಇಡೀ ಕುಟುಂಬಕ್ಕೆ ಮನರಂಜನೆಯನ್ನು ಒದಗಿಸುವುದರಲ್ಲಿ ಪರಿಣತರಾಗಿದ್ದಾರೆ.
ಧಾತು ಬೊಂಬೆಯಾಟಗಳು ಸೂಕ್ಷ್ಮ ವಿವರಗಳು ಮತ್ತು ತಾಂತ್ರಿಕ ಪರಿಪಕ್ವತೆಯಿಂದ ಭೂಯಿಷ್ಠವಾಗಿದ್ದು, ವಿಸ್ತೃತರೂಪದಲ್ಲಿ ಪ್ರದರ್ಶನಗೊಳ್ಳುತ್ತವೆ. ಧಾತು ಸಂಸ್ಥೆಯ ಇತರ ಬೊಂಬೆಯಾಟಗಳನ್ನು ಹೆಸರಿಸುವುದಾದರೆ, ವಿಜಯನಗರ ವೈಭವ (ಕನ್ನಡ), ಹರಿಶ್ಚಂದ್ರ (ಕನ್ನಡ ಮತ್ತು ಇಂಗ್ಲೀಷ್), ಅಷ್ಟಾವಕ್ರ (ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ), ಧರ್ಮವ್ಯಾಧ (ಇಂಗ್ಲೀಷ್), ನಳ ದಮಯಂತಿ ಮತ್ತು ಶೂರ್ಪಣಖ ಪ್ರಸಂಗ.
ಧಾತು ಸಂಸ್ಥೆಯು ಭಾರತೀಯ ಬೊಂಬೆಯಾಟಗಳಂತಹ ಶ್ರೀಮಂತ ಪ್ರಕಾರವನ್ನು ಬೆಂಗಳೂರಿನ ಮಹಾಜನತೆಗೆ ಪರಿಚಯಿಸಲೋಸುಗ, ಪ್ರತಿ ವರ್ಷವೂ ಧಾತು ಬೊಂಬೆಯಾಟ ಉತ್ಸವವನ್ನು ಏರ್ಪಡಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಈ ಉತ್ಸವ ಡಿಸೆಂಬರ್ 29, 30 ಮತ್ತು ಜನವರಿ 1, 2012 ರಲ್ಲಿ ನಡೆಯಲಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications