ತಪ್ಪದೇ ಬನ್ನಿ, ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ

* ವಿಶ್ವನಾಥ್ ಹುಲಿಕಲ್, ಉತ್ತರ ಕ್ಯಾಲಿಫೋರ್ನಿಯ
* ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ
* ಪ್ರಸ್ತುತಿ: ಭಾರತೀಯ ವಿದ್ಯಾ ಭವನ ಮತ್ತು ಇನ್ ಫೋಸಿಸ್ ಪ್ರತಿಷ್ಠಾನ
* ನಿರ್ದೇಶನ: ಅನುಪಮ ಹೊಸಕೆರೆ
* ದಿನಾಂಕ: ಜೂನ್ 9, 2011
* ದಿನ: ಗುರುವಾರ
* ಸಮಯ: ಸಂಜೆ 6.00 ರಿಂದ 7.30 ರವರೆಗೆ
* ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ
ಬೆಂಗಳೂರು - 560004
ಸಂಪರ್ಕ: ಧಾತು 6568 3396 ಅಥವ [email protected] ಸರ್ವರಿಗೂ ಸುಸ್ವಾಗತ
ಕಥೆ: ಮಹರ್ಷಿ ವೇದವ್ಯಾಸರು ರಚಿಸಿದ ಭಾಗವತದಿಂದ ಈ ಕಥೆಯನ್ನು ಆರಿಸಲಾಗಿದೆ. ಸ್ವಾರ್ಥಿ, ದುರಹಂಕಾರಿ ಮತ್ತು ಶಕ್ತಿಶಾಲಿ ರಾಕ್ಷಸರ ವಂಶದಲ್ಲಿ ಪ್ರಹ್ಲಾದ ಎಂಬ ಮಗುವಿನ ಜನನವಾಗುತ್ತದೆ. ಬಾಲ್ಯದಿಂದಲೇ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದ, ದುಷ್ಟಶಕ್ತಿಗಳ ನಿರ್ಮೂಲನಕ್ಕೆ ಕಾರಣಕರ್ತನಾಗುತ್ತಾನೆ. ಕಂಬದೊಳಗಿಂದ ನರಸಿಂಹ ಪ್ರತ್ಯಕ್ಷವಾಗಿ ಅಸುರನ ವಧೆ ಮಾಡುವ ಮೂಲಕ, ಕಥೆ ರೋಮಾಂಚಕ ಮುಕ್ತಾಯವನ್ನು ಮುಟ್ಟುತ್ತದೆ. ಪ್ರಹ್ಲಾದನ ಈ ರೋಚಕ ಕಥೆ ಅನೇಕ ರೀತಿಯ ಬೊಂಬೆಯಾಟಗಳಿಗೆ ವಸ್ತುವಾಗಿದೆ.
ಧಾತು ಬೊಂಬೆಯಾಟ ಸಂಸ್ಥೆ ಬೆಂಗಳೂರಿನ ಪ್ರಮುಖ ಬೊಂಬೆಯಾಟ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಹಂಪಿ ಉತ್ಸವ, ಸುವರ್ಣ ಕರ್ನಾಟಕ ಮಹೋತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ, ಸಂಸ್ಕೃತ ಪುಸ್ತಕ ಮೇಳ ಮತ್ತು "ರಂಗ ಶಂಕರ"ದ ರಂಗ ಉಗಾದಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿದೆ.
ಧಾತುವಿನ ನಿರ್ದೇಶಕಿ ಶ್ರೀಮತಿ ಅನುಪಮ ಹೊಸಕೆರೆಯವರು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಶಿಪ್ಗೆ ಭಾಜನರಾಗಿದ್ದಾರೆ. ಶ್ರೀಮತಿಯವರು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಮೌಲಿಕವಾದ ಕಥೆಗಳನ್ನು ಆರಿಸಿಕೊಂಡು, ಕರ್ನಾಟಕದ ಸುಂದರ ಮತ್ತು ಶಾಸ್ತ್ರೀಯ ಬೊಂಬೆಯಾಟಗಳ ಮೂಲಕ ಇಡೀ ಕುಟುಂಬಕ್ಕೆ ಮನರಂಜನೆಯನ್ನು ಒದಗಿಸುವುದರಲ್ಲಿ ಪರಿಣತರಾಗಿದ್ದಾರೆ.
ಧಾತು ಬೊಂಬೆಯಾಟಗಳು ಸೂಕ್ಷ್ಮ ವಿವರಗಳು ಮತ್ತು ತಾಂತ್ರಿಕ ಪರಿಪಕ್ವತೆಯಿಂದ ಭೂಯಿಷ್ಠವಾಗಿದ್ದು, ವಿಸ್ತೃತರೂಪದಲ್ಲಿ ಪ್ರದರ್ಶನಗೊಳ್ಳುತ್ತವೆ. ಧಾತು ಸಂಸ್ಥೆಯ ಇತರ ಬೊಂಬೆಯಾಟಗಳನ್ನು ಹೆಸರಿಸುವುದಾದರೆ, ವಿಜಯನಗರ ವೈಭವ (ಕನ್ನಡ), ಹರಿಶ್ಚಂದ್ರ (ಕನ್ನಡ ಮತ್ತು ಇಂಗ್ಲೀಷ್), ಅಷ್ಟಾವಕ್ರ (ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ), ಧರ್ಮವ್ಯಾಧ (ಇಂಗ್ಲೀಷ್), ನಳ ದಮಯಂತಿ ಮತ್ತು ಶೂರ್ಪಣಖ ಪ್ರಸಂಗ.
ಧಾತು ಸಂಸ್ಥೆಯು ಭಾರತೀಯ ಬೊಂಬೆಯಾಟಗಳಂತಹ ಶ್ರೀಮಂತ ಪ್ರಕಾರವನ್ನು ಬೆಂಗಳೂರಿನ ಮಹಾಜನತೆಗೆ ಪರಿಚಯಿಸಲೋಸುಗ, ಪ್ರತಿ ವರ್ಷವೂ ಧಾತು ಬೊಂಬೆಯಾಟ ಉತ್ಸವವನ್ನು ಏರ್ಪಡಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಈ ಉತ್ಸವ ಡಿಸೆಂಬರ್ 29, 30 ಮತ್ತು ಜನವರಿ 1, 2012 ರಲ್ಲಿ ನಡೆಯಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications