ಬೆಂಗಳೂರು: ಬಾಬಾ ಬೆಂಬಲಿಗರಲ್ಲಿ ಐವರು ಅಸ್ವಸ್ಥ

Baba Ramdev
ಬೆಂಗಳೂರು ಜೂ 7: ಕಪ್ಪು ಹಣದ ವಿರುದ್ಧ ಯುದ್ಧ ಸಾರಿರುವ ಬಾಬಾ ರಾಮದೇವ್ ಅವರು ಆರಂಭಿಸಿದ ಉಪವಾಸ ಸತ್ಯಾಗ್ರಹಕ್ಕೆ ಬೆಂಗಳೂರಿನಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಜೂ 4 ರಿಂದ ಆರಂಭವಾದ ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕೆಲವರು ಇಂದು ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆದ ಘಟನೆ ಫ್ರೀಡಂ ಪಾರ್ಕ್ ನಲ್ಲಿ ನಡೆದಿದೆ.

ದೇಶಕ್ಕೋಸ್ಕರ ವಿದ್ಯಾರ್ಥಿಗಳು, ಯುವ ಜನಾಂಗ ಉಪವಾಸ ಕೈಗೊಂಡಿದ್ದಾರೆ. ಯಾರ ಮೇಲೂ ಒತ್ತಡ ಹೇರಿಲ್ಲ. ಪ್ರತಿ ದಿನ ಹೆಚ್ಚೆಚ್ಚು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸ್ವಾಮಿ ದಿವ್ಯಾನಂದ ಹೇಳಿದ್ದಾರೆ. ಆದರೆ, ಇಂದು ಮಂಗಳೂರಿನ ಸತೀಶ್ ಬಂಗೇರ, ಪ್ರಶಾಂತ್ ಕಲ್ಮಠ, ಕುಶಾಲನಗರದ ಚಂದ್ರಪ್ಪ ಮಾಸ್ತರ್, ತುಮಕೂರಿನ ಜಯಲಕ್ಷ್ಮೀ, ಬೆಂಗಳೂರಿನ ದಿವ್ಯೇಶ್ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಿ ಬಾಬಾಗೆ ಬೆಂಬಲ ಪ್ರದರ್ಶಿಸುವ ಭರದಲ್ಲಿ ದೈಹಿಕವಾಗಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೈ ಜೋಡಿಸಿದ ವಿದ್ಯಾರ್ಥಿಗಳು : ನಮ್ಮನ್ನು ಜೈಲಿಗೆ ಹಾಕಿದ್ರೂ ಹೆದರುವುದಿಲ್ಲ. ನಮ್ಮ ವೈಯಕ್ತಿಕ ಪ್ರಗತಿಗಿಂತ ದೇಶದ ಪರಿಸ್ಥಿತಿ ಸುಧಾರಣೆ ಮುಖ್ಯ ಎಂದು ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳ ಗುಂಪು ಘೋಷಿಸಿದ್ದಾರೆ. ಇದುವರೆವಿಗೂ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹದಿಂದ ಒಟ್ಟು ಏಳು ಜನ ಅಸ್ವಸ್ಥರಾಗಿದ್ದಾರೆ.

ಅತ್ತ ದೆಹಲಿಯಲ್ಲಿ ನಡೆದ ಬಾಬಾ ರಾಮದೇವ್ ಬಂಧನ ಗಲಾಟೆಯಲ್ಲಿ ಲಾಠಿ ಏಟು, ಬೂಟೇಟು ತಿಂದು ಗಾಯಗೊಂಡ ಬಾಬಾ ಅಭಿಮಾನಿಗಳಿಗೆ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಉಪವಾಸ ಕೈಬಿಡುವಂತೆ ಬಾಬಾ ರಾಮದೇವ್ ತಮ್ಮ ಬೆಂಬಲಿಗರನ್ನು ಕೋರಿದ್ದಾರೆ. ತಾವೊಬ್ಬರೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+