ಬಾಬಾ ರಾಮದೇವ್ ಒಬ್ಬ ಕೊಲೆಗಡುಕ : ಕಾಂಗ್ರೆಸ್

'ಯೋಗ ಶಿಬಿರ ನಡೆಸಲು ಪೊಲೀಸರು ಅನುಮತಿ ನೀಡಲಾಗಿತ್ತು. ಆದರೆ ರಾಮದೇವ್ ಉಪವಾಸ ಸತ್ಯಾಗ್ರಹ ಕೈಗೊಂಡರು. ಇದು ಕಾನೂನಿಗೆ ವಿರೋಧವಾಗಿತ್ತು. ರಾಷ್ಟ್ರದ ರಾಜಧಾನಿಯಲ್ಲಿ ಶಾಂತಿ ಕದಡಲು ಅವರಿಗೆ ಅವಕಾಶ ನೀಡಲಾಗದು. ಆದ್ದರಿಂದ ಪೊಲೀಸರು ತಕ್ಕ ಕ್ರಮ ಕೈಗೊಂಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಬಾಬಾ ಅನೇಕ ವರ್ಷದಿಂದ ಜನರನ್ನು ವಂಚಿಸುತ್ತಿದ್ದಾರೆ. ಈಗ ಸರಕಾರವನ್ನು ಮರಳು ಮಾಡಲು ಯತ್ನಿಸಿದರು. ಬಾಬಾ ರಾಜಕೀಯ ಮಾಡತೊಡಗಿದರು. ಜನರ ಭಾವನೆಗಳೊಂದಿಗೆ ಆಟವಾಡತೊಡಗಿದರು. ಕಳ್ಳನನ್ನು ಹೇಗೆ ವಿಚಾರಿಸಿಕೊಳ್ಳಬೇಕೊ ಹಾಗೆ ಬಾಬಾರನ್ನು ನೋಡಿಕೊಳ್ಳಲಾಗಿದೆ. ಅವರಿಗೆ ತಕ್ಕ ಶಾಸ್ತಿಯಾಗಿದೆ' ಎಂದು ಸಿಂಗ್ ಹರಿಹಾಯ್ದರು.












Click it and Unblock the Notifications