Get Updates
Get notified of breaking news, exclusive insights, and must-see stories!

ಲೋಕಪಾಲ ಮಸೂದೆ ಸಭೆಗೆ ಬಹಿಷ್ಕಾರ: ಸಂತೋಷ್ ಹೆಗ್ಡೆ

Boycott Lokpal Bill meeting
ನವದೆಹಲಿ, ಜೂನ್ 5: ನಾಳೆ ನಡೆಯಬೇಕಿದ್ದ ಜನ ಲೋಕಪಾಲ ಮಸೂದೆ ಸಭೆಯನ್ನು ಬಹಿಷ್ಕರಿಸಲು ಜನ ಲೋಕಪಾಲ ಸಮಿತಿಯ ನಾಗರಿಕ ಸದಸ್ಯರು ನಿರ್ಧರಿಸಿರುವುದಾಗಿ ಜನ ಲೋಕಪಾಲ ಕರಡು ಸಮಿತಿಯ ಸದಸ್ಯ ಮತ್ತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರಕಾರ ಅಡ್ಡಿ ಮಾಡಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಬಾಬಾ ಅವರನ್ನು ಬಂಧಿಸಿದ ರೀತಿ 1975ರ ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸಿದೆ. ಇದು ಜನರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ" ಎಂದರು.

"ರಾಮದೇವ್ ರನ್ನು ತುರ್ತಾಗಿ ಬಂಧಿಸುವ ಅಗತ್ಯವೇನಿತ್ತು? ಪ್ರತಿಭಟನಕಾರರಿಗೆ ಈ ರೀತಿಯ ಪ್ರತಿಕ್ರಿಯೆ ನೀಡಬೇಕಿತ್ತೇ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕಿದೆ. ನನಗೆನಿಸುತ್ತಿದೆ ಸರಕಾರವು ಜನರ ಪ್ರತಿಭಟಿಸುವ ಹಕ್ಕನೇ ಕಿತ್ತುಕೊಳ್ಳುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಬಾಬಾ ರಾಮದೇವ್ ಅವರೊಂದಿಗೆ ಸರಕಾರ ಇನ್ನು ಯಾವುದೇ ರೀತಿಯ ಮಾತುಕತೆಗಳನ್ನು ನಡೆಸುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+