ಎಸ್ಸೆಸ್ಸೆಲ್ಸಿ (2011) ಮೌಲ್ಯಮಾಪನ ಓವರ್, ಫಲಿತಾಂಶ ಬಾಕಿ
ಬೆಂಗಳೂರು,
ಏ. 4 : ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ 2011ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಇದೀಗ ಮುಗಿಯುತ್ತ ಬಂದಿದೆ. ರಾಜ್ಯದ ಮೂಲೆಮೂಲೆಗಳಲ್ಲಿರುವ ಶೈಕ್ಷಣಿಕ ಜಿಲ್ಲೆಗಳಿಂದ ಮೌಲ್ಯಮಾಪನಗೊಂಡ ಪತ್ರಿಕೆಗಳು ಬೆಂಗಳೂರು ಕಚೇರಿಯನ್ನು ತಲುಪುವ ಮಾರ್ಗ ಮಧ್ಯದಲ್ಲಿವೆ. ಈ ಬಾರಿ 8.73 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತುಕೊಂಡಿದ್ದರು. id="toptextpromo">ಮಲ್ಲೇಶ್ವರ
ಆರನೇ ತಿರುವಿನಲ್ಲಿರುವ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷಾ ಮಂಡಳಿಯ (KSEEB) ಕಚೇರಿಗೆ ಉತ್ತರ ಪತ್ರಿಕೆಗಳ ಮೊಹರು ಮಾಡಿದ ಬಂಡಲ್ಲುಗಳು ಲಾರಿಗಳ ಮೂಲಕ ಬಂದು ಬೀಳುತ್ತಿರುವ ದೃಶ್ಯ ಮಂಗಳವಾರ ಕಂಡುಬಂತು. ಉತ್ತರ ಪತ್ರಿಕೆಗಳಲ್ಲಿರುವ ನಮೂದಾಗಿರುವ ಫಲಿತಾಂಶದ ಮಾಹಿತಿಗಳನ್ನು ಕಂಪ್ಯೂಟರ್ಗೆ ಅಳವಡಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ದಟ್ಸ್ ಕನ್ನಡಕ್ಕೆ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಫಲಿತಾಂಶ
ಯಾವಾಗ ಎಂಬ ಪ್ರಶ್ನೆಗೆ, "ಮೊದಲು ಡೇಟಾ ಫೀಡಿಂಗ್ ಆನಂತರ ಚೆಕ್ಕಿಂಗ್ ಆಗಬೇಕು. ಆಗಷ್ಟೇ ಫಲಿತಾಂಶ ಪ್ರಕಟಣೆಗೆ ಕಾಲ ಪಕ್ವವಾಗುತ್ತದೆ" ಎಂದು ಪರೀಕ್ಷೆ - ಫಲಿತಾಂಶ ವಿಭಾಗದ ಸಿಬ್ಬಂದಿ ನಮ್ಮ ವರದಿಗಾರರಿಗೆ ಹೇಳಿದರು. ಈಗಾಗಲೇ ಪ್ರಕಟವಾಗಿರುವಂತೆ ಫಲಿತಾಂಶ ಮೇ 15ರ ಒಳಗೆ ಹೊರಬೀಳಲಿದೆ. ಈ ಅಂಶವನ್ನು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪಷ್ಟಪಡಿಸಿದ್ದರೂ ಕೂಡ ಮಂಡಳಿಯ ಕಂಪ್ಯೂಟರ್ ವಿಭಾಗ ಗ್ರೀನ್ ಸಿಗ್ನಲ್ ನೀಡದ ಹೊರತು ಫಲಿತಾಂಶ ದಿನಾಂಕವನ್ನು ನಿಗದಿ ಮಾಡುವುದು ಕಷ್ಟ. ಫಲಿತಾಂಶ ಸದ್ಯದಲ್ಲೇ ನಿರೀಕ್ಷಿಸಿ.











Click it and Unblock the Notifications