ನಿನ್ನೆ ಲಕ್ಷ ಇಂದು 500 ಕೋಟಿ ಒಡೆಯ ಜಗನ್ ಕಥೆ

ಕಡಪ ಲೋಕಸಬಾ ಕ್ಷೇತದ ನೂತನ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೈಎಸ್ ಜಗನ್ಮೋಹನ್ ರೆಡ್ಡಿ ತಮ್ಮ ಆಸ್ತಿಯನ್ನು ಘೋಷಿಸಿದ್ದು, ಒಟ್ಟು 500 ಕೋಟಿ ರೂಪಾಯಿ ಹೊಂದಿರುವುದಾಗಿ ಚುನಾವಣೆ ಪಮಾಣ ಪತ್ರದಲ್ಲಿ ತಿಳಿಸಿದ್ದಾರೆ. 2004ರಲ್ಲಿ 9.18 ಲಕ್ಷ ರೂಪಾಯಿ, 2009ರಲ್ಲಿ ಜಗನ್ಮೋಹನ್ ರೆಡ್ಡಿ ತಮ್ಮ ಆಸ್ತಿ 77 ಕೋಟಿ ರೂಪಾಯಿಗಳಾಗಿವೆ ಎಂದು ಬಹಿರಂಗಪಡಿಸಿದ್ದರು.
ವಿಡಿಯೋ: ಜಗನ್ ಬಂಡಾಯ, ರಾಜೀನಾಮೆ
ಒಂದು ವೇಳೆ ಲೋಕಸಭೆಗೆ ಆಯ್ಕೆಯಾದಲಿ, ಸಂಸತ್ತಿನಲ್ಲಿ ಶ್ರೀಮಂತ ಸಂಸದ ಎನ್ನುವ ಖ್ಯಾತಿಗೆ ಜಗನ್ ಒಳಗಾಗುತ್ತಾರೆ. ಆದರೂ, ಶ್ರೀಮಂತ ಸಂಸದರಾಗಿ ಕರ್ನಾಟಕದ ಮದ್ಯದ ದೊರೆ ವಿಜಯ್ ಮಲ್ಯ ಅವರ ಹೆಸರೇ ಉಳಿಯಲಿದೆ. ಮಲ್ಯ ಅವರ ಆಸ್ತಿ ಮೌಲ್ಯ ಸುಮಾರು 610 ಕೋಟಿ ರು ಗಳಾಗಿವೆ.
ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ: ಪ್ರಮಾಣ ಪತ್ರ ಪ್ರಕಾರ, ಜಗನ್ 365.68 ಕೋಟಿ ರೂಪಾಯಿಗಳ ನಗದು ಹಣವನ್ನು ಹೊಂದಿದ್ದಾರೆ. ಅವರ ಪತ್ನಿ ಭಾರತಿ ರೆಡ್ಡಿ 41.33 ಕೋಟಿ ರೂಪಾಯಿ ನಗದು ಮೊತ್ತವನ್ನು ಹೊಂದಿದ್ದಾರೆ. ಷೇರು, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಯ ಪ್ರಮಾಣ 359 ಕೋಟಿ ರೂಪಾಯಿಗಳಿಗೂ ಮೀರಿದೆ. ಬ್ಯಾಂಕ್ ಖಾತೆಗಳಲ್ಲಿ (5.52 ಕೋಟಿ ರೂಪಾಯಿ) ಎನ್ಎಸ್ಎಸ್, ಪೋಸ್ಟಲ್ ಸೇವಿಂಗ್ಸ್, ವಿಮೆ ಪಾಲಿಸಿಗಳು(7.08 ಲಕ್ಷ ರೂಪಾಯಿ) ಆಭರಣಗಳು ಮತ್ತು ಇತರ ಆಸ್ತಿಗಳು (20.56 ಲಕ್ಷ ರೂಪಾಯಿ) ಹೊಂದಿದ್ದಾರೆ.
ಜಗನ್ ಪತ್ನಿ ಭಾರತಿ, ಶೇರುಗಳು ಮ್ಯೂಚುವಲ್ ಫಂಡ್ಗಳಲ್ಲಿ 36.1 ಕೋಟಿ ರೂಪಾಯಿಗಳು, ಬ್ಯಾಂಕ್ ಖಾತೆಯಲ್ಲಿ ನಗದು ಮೊತ್ತ 56.46 ಕೋಟಿ ರೂಪಾಯಿ, ಆಭರಣಗಳು, ಚಿನ್ನ ಮತ್ತು ವಜ್ರ ಸೇರಿದಂತೆ ಒಟ್ಟು ಮೊತ್ತ 3.8 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದು, ತಾವು ಯಾವುದೇ ವಾಹನ, ಹೆಲಿಕಾಪ್ಟರ್, ಹಡಗುಗಳ ಮಾಲೀಕತ್ವವನ್ನು ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲೂ ಆಸ್ತಿ: ಜಗನ್ ಸ್ಥಿರಾಸ್ತಿಯಲ್ಲಿ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಭೂಮಿ ಮತ್ತು ವಸತಿ ಭೂಮಿಗಳ ಮೊತ್ತ 150 ಕೋಟಿ ರೂಪಾಯಿಗಳಾಗಿವೆ. ಇಡುಪುಲಪಾಯಾ ಗ್ರಾಮದಲ್ಲಿ 42.44 ಎಕರೆ ಭೂಮಿ, ಶಿವಮೊಗ್ಗದಲ್ಲಿ ಪತ್ನಿ ಭಾರತಿ ಹೆಸರಿನಲ್ಲಿ 9 ಎಕರೆ ಭೂಮಿ, ಉಡುಪಿ ಜಿಲ್ಲೆಯಲ್ಲಿ 0.37 ಏಕರೆ ಭೂಮಿ, ಪುಲಿವೆಂದುಲಾ ಪಟ್ಟಣದಲ್ಲಿ 0.95 ಎಕರೆ ಭೂಮಿ, ಕಡಪ ಜಿಲ್ಲೆಯ ಕಂಚಿವರಿಪಲ್ಲೆ ಪಟ್ಟಣದಲ್ಲಿ 1 ಎಕರೆ ಭೂಮಿಯನ್ನು ಹೊಂದಿದ್ದು ಒಟ್ಟು ಮೊತ್ತ 24 ಕೋಟಿ ರೂಪಾಯಿಗಳಾಗಲಿವೆ ಎಂದು ಆಸ್ತಿ ವಿವರಣೆಯಲ್ಲಿ ಘೋಷಿಸಿಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications