ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಕ್ಕೆಯಲ್ಲಿ ಹೆಣ್ಣು ಮಗು ಕತ್ತು ಹಿಸುಕಿ ಬರ್ಬರ ಹತ್ಯೆ
ಆರೋಪಿ ಶೇಖರ ಹರಿಕ್ಕಾರ ಹಾಗೂ ಈತನ ಪ್ರೇಯಸಿ ಕಮ್ ಮಡದಿ ನಾಗರತ್ನ ತನಿಖೆ ವೇಳೆ ದಂಪತಿ ಮಗು ನಮ್ಮದೇ ಆದರೆ, ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದಿದ್ದಾರೆ. ಶೇಖರ ಹರಿಕ್ಕಾರ ಭೂಸೇನೆಯಲ್ಲಿ ಸೈನಿಕನಾಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ. ಕುಮಟಾ ಮೂಲದ ನಾಗರತ್ನ ಈತನ ಪ್ರೇಯಸಿ. ಇವರ ಪ್ರೇಮ ಪ್ರಣಯದ ಫಲವಾಗಿ ಕಳೆದ ಮಾರ್ಚ್ ನಲ್ಲಿ ಹೆಣ್ಣು ಮಗುವಿಗೆ ಜನನವಾಗಿದೆ.
ಬೇಡದ ಹೆಣ್ಣುಮಗು ಕಥೆ ಮುಗಿಸಲು ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ಮಗುವನ್ನು ಸುಬ್ರಹ್ಮಣ್ಯದಲ್ಲಿ ಬಿಟ್ಟು ಹೋಗೋಣ ಎಂದು ಗಂಡ ಒಂದು ಬಾರಿ ಸಲಹೆ ನೀಡಿದ್ದ. ಆದರೆ, ಕೊನೆಗ್ ಇಬ್ಬರೂ ಸೇರಿ ಮಗುವನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಸತಿಗೃಹವೊಂದನ್ನು ಪಡೆದು ಕತ್ತುಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments
ಕೊಲೆ ಮಗು ಕ್ರೈಂ ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲಾಸುದ್ದಿ murder crime beat kukke subramanya dakshina kannada district news
English summary
Girl child throttled to death in Kukke Subramanya. Couple killed their own child at Kukke Subramanya Sulya have been held in Kumta by Dakshin Kannada Police. However, Couples denies that they did not kill the child but it had died owing to ill health said the police.
Story first published: Saturday, April 9, 2011, 10:08 [IST]