ಸಿಬಿಐ ಕಚೇರಿ ಮೇಲೆ ದಾವೂದ್ ದಾಳಿ ಬೆದರಿಕೆ

ವೀಡಿಯೊ: ಸಿಬಿಐ ಕಚೇರಿ ಮೇಲೆ ದಾವೂದ್ ದಾಳಿ ?
ಅಧಿಕೃತ ಮೂಲವೊಂದು ಮುಂಬಯಿಯಿಂದ ಈ ಮಾಹಿತಿಯನ್ನು ಕೇಂದ್ರ ಕಚೇರಿಗೆ ಇತ್ತೀಚೆಗೆ ರವಾನಿಸಿತ್ತು. ಆದ್ದರಿಂದ ತಕ್ಷಣ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಿಬಿಐನ ಎಲ್ಲ ಕಚೇರಿಗಳೂ ಈ ಎಚ್ಚರಿಕೆಯ ಸಂದೇಶ ಕಳಿಸಿದ್ದೇವೆ ಎಂದು ಆಧಿಕಾರಿ ತಿಳಿಸಿದ್ದಾರೆ. ಸಿಬಿಐ ಈ ಮಾಸಾಂತ್ಯ ಹಗರಣದ ಸಂಬಂಧ ತನ್ನ ಮೊದಲ ಆರೋಪಪಟ್ಟಿ ಸಲ್ಲಿಸುವ ಆಂದಾಜಿದೆ.
ಶಾಹೀದ್ ಉಸ್ಮಾನ್ ಬಲ್ವಾ ಹುಟ್ಟುಹಾಕಿರುವ ಈತಿಸಲಾತ್ ಡಿಬಿ ಎಂಬ ಕಂಪನಿ ಸ್ವಾನ್ ಟೆಲಿಕಾಂ ಹೆಸರಿನಲ್ಲಿ 2ಜಿ ತರಂಗಗುಚ್ಛ ಹಗರಣದಲ್ಲಿ ಭಾಗಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಲ್ವಾನನ್ನು ಬಂಧಿಸಲಾಗಿದೆ. ಬೇಹುಗಾರಿಕೆ ಮೂಲಗಳ ಪ್ರಕಾರ ಈತಿಸಲಾತ್ ಡಿಬಿ ಕಂಪನಿ ಮತ್ತು ದಾವೂದ್-ನ ಡಿ ಕಂಪನಿಗೂ ಸಂಭಂಧವಿದೆ ಎನ್ನಲಾಗಿದೆ. ಅಂದರೆ ಬಲ್ವಾ ಮೂಲಕ ದಾವೂದ್ 2ಜಿ ತರಂಗಗುಚ್ಛ ಅಕ್ರಮದಲ್ಲಿ ಸಕ್ರಿಯನಾಗಿದ್ದಾನೆ ಎಂದು ಮೂಲಗಳು ಹೇಳಿವೆ.












Click it and Unblock the Notifications