ವಿಶ್ವಕಪ್ : ಎಲ್ ಜಿಯಿಂದ ವಿಶೇಷ ಆಡ್ರ್ಯಾಂಡ್ ಫೋನ್
ನವದೆಹಲಿ, ಮಾ.6: ಭಾರತದಲ್ಲಿ ಕ್ರಿಕೆಟ್ ಬಗ್ಗೆ ಇರುವ ಕ್ರೇಜ್ ಅನ್ನು ಸರಿಯಾಗಿ ಬಳಸಿಕೊಳ್ಳಲು ತೈವಾನ್ ಮೂಲದ ಮೊಬೈಲ್ ಉತ್ಪಾದನಾ ಸಂಸ್ಥೆ ಎಲ್ ಜಿ ಮುಂದಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಮೊಬೈಲ್ ಸಂಸ್ಥೆ ವಿಶ್ವಕಪ್ 2011 ವಿಶೇಷ ಆಂಡ್ರ್ಯಾಡ್ ಮೊಬೈಲ್ ಫೋನ್ ಎಲ್ ಜಿ ಆಪ್ಟಿಮಸ್ ಒನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಲು ಬಗೆ ಬಗೆ ಉಡುಗೆ ತೊಡಗೆಗಳನ್ನು ತೊಟ್ಟು ಜನರ ಗಮನ ಸೆಳೆಯುವುದು ಮಾಮೂಲಿ. ಎಲ್ ಜಿ ಹೊರತಂದಿರುವ ಆಪ್ಟಿಮಸ್ ಒನ್ ನಿಯಮಿತ ಮೊಬೈಲ್ ಗಳ ಹಿಂಬದಿ ಹೊದಿಕೆಯಲ್ಲಿ ಚಿನ್ನದ ಬಣ್ಣದಲ್ಲಿ ವಿಶ್ವಕಪ್ 2011 ಟ್ರೋಫಿಯ ಚಿತ್ರವನ್ನು ಕೆತ್ತಲಾಗಿದೆ. ಆಕರ್ಷಕವಾದ ಈ ಚಿತ್ರದ ಜೊತೆಗೆ ಉತ್ತಮ ಸ್ಮಾರ್ಟ್ ಫೋನ್ ಸೌಲಭ್ಯಗಳುಳ್ಳ ಈ ಮೊಬೈಲ್ ಯುವ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುತ್ತದೆ ಎಂಬ ನಂಬಿಕೆ ಎಲ್ ಜಿ ಸಂಸ್ಥೆಗಿದೆ.
ಸುಮಾರು 1000 ಮೊಬೈಲ್ ಫೋನ್ ಗಳು ಮಾತ್ರ ಲಭ್ಯವಿದ್ದು, ತಕ್ಷಣವೇ ನಿಮ್ಮ ಸಮೀಪದ ಎಲ್ ಜಿ ಡೀಲರ್ ಅಥವಾ ಎಲೆಕ್ಟ್ರಿಕ್ ಮಳಿಗೆಯನ್ನು ಸಂಪರ್ಕಿಸುವುದು ಒಳಿತು. ಆಂಡ್ರ್ಯಾಡ್ 2.2 ಫ್ರಾಯೊ ಆಪರೇಟಿಂಗ್ ಸಿಸ್ಟಮ್ ಉಳ್ಳ ಈ ಮೊಬೈಲ್ 600 MHz ಪ್ರೊಸೆಸರ್ ನೊಂದಿಗೆ ಶಕ್ತಿಯುತವಾಗಿದೆ. ಎಲ್ಲಾ ಸ್ಮಾರ್ಟ್ ಫೋನ್ ಗಳಿರುವಂತೆ ವೈ ಫೈ, ಬ್ಲೂಟೂಥ್, ಎಫ್ ಎಂ ರೇಡಿಯೋ ಇದ್ದು ಜೊತೆಗೆ 3.15 ಮೆಗಾ ಪಿಕ್ಸಲ್ ಕೆಮೆರಾ, 3.2 ಇಂಚಿನ ಟಚ್ ಸ್ಕ್ರೀನ್ ಆಕರ್ಷಕವಾಗಿದೆ. 170 MB ಆಂತರಿಕ ಮೆಮೋರಿ ಜೊತೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 ಜಿಬಿ ವರೆಗೂ ಮೆಮೋರಿ ವಿಸ್ತರಣೆ ಮಾಡಿಕೊಳ್ಳುವ ಸೌಲಭ್ಯವಿದೆ.
ಎಲ್ ಜಿ ಆಪ್ಟಿಮಸ್ ಒನ್ ವಿಶೇಷತೆಗಳು :
* 3.2 ಇಂಚು ಟಿಎಫ್ ಟಿ ಟಚ್ ಸ್ಕ್ರೀನ್
* 3.15 ಮೆಗಾ ಪಿಕ್ಸಲ್ ಕೆಮೆರಾ
* ಆಂಡ್ರ್ಯಾಡ್ 2.2 ಫ್ರಾಯೊ(2.3 ಆವೃತ್ತಿ ಅಪಗ್ರೇಡ್ ಸೌಲಭ್ಯ)
* ವೈ ಫೈ, 3ಜಿ, ಜಿಪಿಎಸ್, ಜಿಪಿಆರ್ ಎಸ್ , ಬ್ಲೂಟೂಥ್ 2.1
* ಫೇಸ್ ಹಾಗೂ ಸ್ಮೈಲ್ ಡಿಟೆಕ್ಷನ್, VGA ವಿಡಿಯೋ.
* 512 MB RAM.
* 170 MB ಆಂತರಿಕ ಮೆಮೋರಿ, 32 ಜಿಬಿ ವಿಸ್ತರಣೆ ಸೌಲಭ್ಯ.
* ಡಿಜಿಟಲ್ ಕಾಂಪಸ್, ಡಾಕ್ಯುಮೆಂಟ್ ವ್ಯೂವರ್, ಸಾಮಾಜಿಕ ಜಾಲ ತಾಣ ಸಂಪರ್ಕ.
* ಸ್ಟಿರಿಯೋ ಎಫ್ ಎಂ ರೇಡಿಯೋ
* Li-Ion 1500 mAh ಬ್ಯಾಟರಿ.
ವಿಶ್ವಕಪ್ 2011ಗಾಗಿ ಎಲ್ ಜಿ ಹೊರ ತಂದಿರುವ ಆಪ್ಟಿಮಸ್ ಒನ್ ನಿಯಮಿತ ಮೊಬೈಲ್ ಗಳು ದೇಶದ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ. ಅಭಿಮಾನಿಗಳನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸುವ ಈ ಮೊಬೈಲ್ ಬೆಲೆ 12,990. ಇನ್ನೇಕೆ ತಡ, ಅಭಿಮಾನಿಗಳೆ ಈ ಮೊಬೈಲ್ ಅನ್ನು ತ್ವರಿತವಾಗಿ ನಿಮ್ಮದಾಗಿಸಿಕೊಳ್ಳಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications